Featured
ಚೆನ್ನೈ ಮಾದರಿಯಲ್ಲಿ ಬೆಂಗಳೂರು ಲಾಕ್ಡೌನ್..? ವಿಶೇಷ ಸಭೆಯಲ್ಲಿ ನಿರ್ಧಾರವಾಗಲಿದೆ ಸಿಲಿಕಾನ್ ಸಿಟಿ ಭವಿಷ್ಯ..!

ರೈಸಿಂಗ್ ಕನ್ನಡ:
ಬೆಂಗಳೂರು:
ಜೂನ್ 18, 2020:
- ಹೊಸ ಪ್ರಕರಣಗಳು: 210
- ಬೆಂಗಳೂರು ನಗರ: 17
ಜೂನ್ 19, 2020:
- ಹೊಸ ಪ್ರಕರಣಗಳು: 416
- ಬೆಂಗಳೂರು ನಗರ: 138
ಜೂನ್ 20, 2020:
- ಹೊಸ ಪ್ರಕರಣಗಳು: 337
- ಬೆಂಗಳೂರು ನಗರ: 94
ಜೂನ್ 21, 2020:
- ಹೊಸ ಪ್ರಕರಣಗಳು: 453
- ಬೆಂಗಳೂರು ನಗರ: 196

ಬೆಂಗಳೂರು ಚೆನ್ನೈ ಮಾದರಿಯಲ್ಲಿ ಸೀಲ್ ಡೌನ್ ಆಗುತ್ತಾ..? ಅಥವಾ ಕರ್ನಾಟಕವೇ ಮತ್ತೆ ಸೀಲ್ ಡೌನ್ ಆಗುತ್ತಾ.? ಇಂತಹದ್ದೊಂದು ಸುದ್ದಿ ಎಲ್ಲಾ ಕಡೆ ಓಡಾಡ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗ್ತಾ ಇರೋದ್ರಿಂದ ಚೆನ್ನೈ ರೀತಿಯಲ್ಲೇ ಬೆಂಗಳೂರು ಸೀಲ್ ಡೌನ್ ಆಗುತ್ತಾ ಅನ್ನೋ ಸಂಶಯ ಎಲ್ಲಾ ಕಡೆಯೂ ಇದೆ.
ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಹೆಚ್ಚಾಗ್ತಿದೆ. ದಿನದಿಂದ ದಿನಕ್ಕೆ ಹೊಸ ಪ್ರಕರಣ ಸಂಖ್ಯೆ ಹೆಚ್ಚಾಗ್ತಿದೆ. ಅದೇನು ಮಾಡಿದ್ರೂ ಸರಕಾರಕ್ಕೆ ಕೊರೊನಾವನ್ನು ಕಟ್ಟಿ ಹಾಕಲು ಕಷ್ಟವಾಗ್ತಿರುವುದು ಸ್ಪಷ್ಟವಾಗ್ತಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವುದು ಸವಾಲಿನ ಕೆಲಸವಾದ್ರೆ, ಇನ್ನು ಕೆಲವು ಕೇಸ್ಗಳಲ್ಲಿ ಟ್ರಾವೆಲ್ ಹಿಸ್ಟರಿಯೇ ಇಲ್ಲದೇ ಇರುವುದು ತಲೆನೋವು ಹೆಚ್ಚಾಗಲು ಕಾರಣವಾಗಿದೆ. ಕೊರೊನಾ ಆರ್ಭಟವನ್ನು ಹೇಗಾದ್ರೂ ಮಾಡಿ ತಡೆಗಟ್ಟಲು ಸರಕಾರ ಇನ್ನಿಲ್ಲದ ಸರ್ಕಸ್ ನಡೆಸ್ತಿದೆ.
ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನಾ ಕೇಸ್ ಸಂಬಂಧ ಸೋಮವಾರ ಮಧ್ಯಾಹ್ನ ಸಿ.ಎಂ. ಬಿ.ಎಸ್. ಯಡ್ಯೂರಪ್ಪ ವಿಶೇಷ ಸಭೆ ಕರೆದಿದ್ದಾರೆ. ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಪಟ್ಟವರ ಜೊತೆ ಚರ್ಚಿಸಿಲು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ಧತೆ ನಡೆದಿದೆ. ಸಚಿವರು, ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಏನಿದು ಚೆನ್ನೈ ಮಾದರಿ..?
ಅನ್ ಲಾಕ್ ಫೇಸ್ 1 ಮತ್ತು ಅನ್ ಲಾಕ್ ಫೇಸ್ 2 ಸಮಯದಲ್ಲಿ ಚೆನ್ನೈ ನಗರದಲ್ಲಿ ಕೊರೊನಾ ಹಾವಳಿ ಮಿತಿ ಮೀರಿತ್ತು, ಇದನ್ನ ಮನಗಂಡ ಸರ್ಕಾರ ಚೆನ್ನೈನಲ್ಲಿ ಜೂನ್ 19 ರಿಂದ ಜೂನ್ 30ರ ತನಕ ಲಾಕ್ ಡೌನ್ ಹೇರಿದೆ. ಈ 12 ದಿನಗಳ ಕಾಲದಲ್ಲಿ ಕೊರೊನಾ ಕಂಟ್ರೋಲ್ಗೆ ಬರಬಹುದು ಅನ್ನುವ ಲೆಕ್ಕಾಚಾರ ತಮಿಳುನಾಡು ಸರಕಾರದ್ದು.
ಈಗ ಕರ್ನಾಟಕ ಸರಕಾರ ಕೂಡ ಇದೇ ಸ್ಟ್ರಾಟಜಿಯನ್ನು ಇಂಪ್ಲಿಮೆಂಟ್ ಮಾಡಲು ಯೋಚನೆ ನಡೆಸುತ್ತಿದೆ ಅನ್ನೋ ಶಂಕೆ ಎಲ್ಲಾ ಕಡೆಯೂ ವ್ಯಕ್ತವಾಗಿದೆ. ಬೆಂಗಳೂರು ಮಾತ್ರ ಚೆನ್ನೈ ಮಾದರಿಯಲ್ಲಿ ಸೀಲ್ ಡೌನ್ ಆಗುತ್ತಾ ಅಥವಾ ಇಡೀ ಕರ್ನಾಟಕ ಮತ್ತೆ 2 ವಾರ ಲಾಕ್ ಡೌನ್ ಆಗುತ್ತಾ ಅಥವಾ ಯಥಾಸ್ಥಿತಿಯಲ್ಲಿ ರಾಜ್ಯ ಮುಂದುವರೆಯುತ್ತಾ ಅನ್ನೋ ಪ್ರಶ್ನೆಗೆ ಕೆಲ ಹೊತ್ತಿನಲ್ಲೇ ಉತ್ತರ ಸಿಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?