Featured
ತುಮಕೂರಿನ ಅಂಧ ಸಹೋದರಿಯರಿಗೆ ಮನೆ ಕಟ್ಟಿಸಿಕೊಟ್ಟ ಜಗ್ಗೇಶ್

ರೈಸಿಂಗ್ ಕನ್ನಡ :- ನವರಸನಾಯಕ ಜಗ್ಗೇಶ್ ತಾವು ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಂಡುದ್ದಾರೆ. ಸರಿಗಮಪ ಸೀಸನ್ 17ರ ಸ್ಪರ್ಧಿಗಳಾಗಿದ್ದ ಅಂಧ ಸಹೋದರಿಯರಾದ ಮಂಜಮ್ಮ ಹಾಗೂ ರತ್ನಮ್ಮ ಅವರಿಗೆ ಜಗ್ಗೇಶ್ ಅವರು ಮನೆ ಕಟ್ಟಿಸಿಕೊಟ್ಟಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸಂದೇಶವನ್ನು ಹಾಕಿಕೊಂಡಿರುವ ನಡ ಜಗ್ಗೇಶ್ ತಾವು ಪತ್ನಿ ಪರಿಮಳ ಜತೆಯಾಗಿ ರತ್ನಮ್ಮ ಹಾಗೂ ಮಂಜಮ್ಮ ಸಹೋದರಿಯರ ಮನೆ ಗೃಹಪ್ರವೇಶಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾರೆ.
ಕೊರಟಗೆರೆ ಅಭಿಮಾನಿ ಸಂಘದವರಿಗೆ ತುಮಕೂರಿನ ಈ ಅಂಧ ಒ್ರತಿಭೆಗಳಿಗೆ ಮನೆ ಕಟ್ಟಿಸಿಕೊಡಲು ಜಗ್ಗೇಶ್ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಂಘದ ರವಿ, ಮಲ್ಲಣ್ಣ,ಹಾಗೂ ಸಂಘದ ಮಿತ್ರರು ಸೇರಿ ಅಂಧ ಸಹೋದರಿಯರಿಗೆ ಮನೆ ಕಟ್ಟಿಸಿದ್ದಾರೆ. ಬರುವ ಮಾರ್ಚ್ 12 ರಂದು ಮನ್ ಗೃಹಪ್ರವೇಶವಿದ್ದು ಮನೆಯ ಗೃಹಪ್ರವೇಶಕ್ಕೆ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ತೆರಳುತ್ತಿದ್ದಾರೆ.
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಹಾಗೂ ಮಂಜಮ್ಮ ಸಹೋದರಿಯರು ಆಯ್ಕೆಯಾಗಿದ್ದು ಈ ವೇಳೆ ಅವರು ತಮ್ಮ ಕಷ್ಟಗಳನ್ನು ತೋಡಿಕೊಂಡಿದ್ದರು. ಇದನ್ನು ಕೇಳಿದ್ದ ಜಗ್ಗೇಶ್ ಅವರಿಗೆ ಸಹಾಯ ಮಾಡಲು ಭರವಸೆ ಕೊಟ್ಟಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?