Featured
ಮೆಜೆಸ್ಟಿಕಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಷಿಂಗ್ ಮಷಿನ್ ..! ಖಾಸಗಿ ಕಂಪನಿಯಿಂದ ಕೆಂಪೆಗೌಡ ಬಸ್ ನಿಲ್ದಾಣದಲ್ಲಿ ಯಂತ್ರ ಅಳವಡಿಕೆ,

ರೈಸಿಂಗ್ ಕನ್ನಡ:- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( ಕೆಎಸ್ಸಾರ್ಟಿಸಿ) ನಗರದ ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ಪ್ಲಾಸ್ಟಿಕ್ ಬಾಟಲಿ ಪುಡಿ ಮಾಡುವ ಯಂತ್ರ ಅಳವಡಿಸಲು ಮುಂದಾಗಿದೆ.
ರಾಜಧಾನಿಯ ಹೃದಯ ಭಾಗದಲ್ಲಿ ಇರುವ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸದಾ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವ ಪ್ರಮುಖ ಸ್ಥಳ. ನಿತ್ಯ ಈ ಭಾಗದಲ್ಲಿ ಸಂಚರಿಸುವವರ ಸಂಖ್ಯೆ ಲಕ್ಷಾಂತರವಾಗಿದೆ. ಪ್ರಯಾಣಿಕರು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲ್ ಗಳು ಭಾರೀ ಪ್ರಮಾಣದಲ್ಲಿ ಕಸದ ಬುಟ್ಟಿ ಸೇರುತ್ತವೆ. ಪರಿಸರಕ್ಕೆ ಮಾರಕವಾಗಿರುವ ಈ ಪ್ಲಾಸ್ಟಿಕ್ ಬಾಟಲಿಗಳನ್ನು ಪುನರ್ ಬಳಕೆಗೆ ಅನುವಾಗುವಂತೆ ಪುಡಿ ಪುಡಿ ವಿಲೇವಾರಿ ಮಾಡಲು ಬಸ್ ನಿಲ್ದಾಣದಲ್ಲಿ ಬಾಟಲಿ ಪುಡಿ ಮಾಡುವ ಯಂತ್ರ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿನಕ್ಕೆ 2400 ಬಾಟಲ್ ಪುಡಿ
ಸುಮಾರು 3 ಲಕ್ಷ ವೆಚ್ಚದ ಈ ಯಂತ್ರವು ದಿನಕ್ಕೆ 2400 ಬಾಟಲಿಗಳನ್ನು ಪುಡಿ ಮಾಡುತ್ತದೆ. ಗರಿಷ್ಠ ಎರಡು ಲೀಟರ್ ಸಾಮಥ್ಯ ದ ಪ್ಲಾಸ್ಟಿಕ್ ಬಾಟಲಿಗಳನ್ನು ಕೆಲವೇ ಸೆಕೆಂಡ್ ಗಳಲ್ಲಿ ಪುಡಿಗುಟ್ಟಲಿದೆ. ಈ ಒಂದು ಯಂತ್ರದಿಂದ ವಾರ್ಷಿಕ 17.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸಿ, ಅದನ್ನು ಕಸದಬುಟ್ಟಿ ತಯಾರಿಕೆ, ಟಾಯ್ ಲೆಟ್ ಕ್ಯಾಬಿನ್ ತಯಾರಿಕೆ ಮತ್ತು ಮೊದಲಾದ ವಸ್ತುಗಳ ಉತ್ಪಾದನೆಗೆ ಮರುಬಳಕೆ ಮಾಡಬಹುದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?