Featured
ಹೊಸಕೋಟೆ ರಣರಂಗಕ್ಕೆ ಹೊಸ ಟ್ವಿಸ್ಟ್ : ಶರತ್ ಬಚ್ಚೇಗೌಡಗೆ ಜೆಡಿಎಸ್ ಬಲ, ಎಂಟಿಬಿ ನಾಗರಾಜ್ಗೆ ಜೋಡೆತ್ತಿನ ಶಾಕ್..!

ಬೆಂಗಳೂರು : ಹೊಸಕೋಟೆ ವಿಧಾನಸಭಾ ಕ್ಷೇತ್ರ, ಉಪ ಚುನಾವಣಾ ಕಣದಲ್ಲಿ ಸದ್ಯ ಅತ್ಯಂತ ಕುತೂಹಲ ಹಾಗೂ ರೋಚಕತೆಗೆ ಸಾಕ್ಷಿಯಾಗೋ ಸಾಧ್ಯತೆ ಇದೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಅಭ್ಯರ್ಥಿ ಆಗ್ತಿದ್ದಾರೆ. ಆದ್ರೆ, ಬಿಜೆಪಿ ಅಭ್ಯರ್ಥಿ ಆಗಿದ್ದ ಶರತ್ ಬಚ್ಚೇಗೌಡರು, ಪಕ್ಷೇತರ ಅಭ್ಯರ್ಥಿ ಆಗ್ತಿದ್ದಾರೆ. ಇದೀಗ ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ ನೀಡೋದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಹೊಸಕೋಟೆ ರಣರಂಗಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ..
ಹೊಸಕೋಟೆಯಲ್ಲಿ ಶರತ್ಗೆ ಜೆಡಿಎಸ್ ಬೆಂಬಲ ಯಾಕೆ..?
ಈ ಬಗ್ಗೆ ಬೆಂಗಳೂರಿನಲ್ಲಿ ಮಾತ್ನಾಡಿರೋ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಶರತ್ ಬಚ್ಚೇಗೌಡರು, ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಬೆಂಬಲ ನೀಡುತ್ತೇನೆ. ಅವರು ನಮ್ಮನ್ನು ಕೇಳಿದ್ರೆ, ಅಲ್ಲಿಗೆ ಜೆಡಿಎಸ್ ಅಭ್ಯರ್ಥಿಯನ್ನ ಹಾಕುವುದಿಲ್ಲ. ಅವರೆಲ್ಲರೂ ನಮ್ಮವರೇ. ಹಳೆಯ ಮನೆಗೇ ಬರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಈ ಹಿಂದೆ ಎಂಟಿಬಿಗೆ ಡಿಕೆಶಿ ಸವಾಲ್ ಹಾಕಿದ್ರು. ಹೊಸಕೋಟೆ ರಣರಂಗದಲ್ಲಿ ಭೇಟಿಯಾಗೋಣ ಎಂದು. ಇದೀಗ ಡಿಕೆಶಿ, ಹೆಚ್ಡಿಕೆ ಮೂಲಕ ಅಭ್ಯರ್ಥಿಯನ್ನ ಹಾಕಿಸದೇ, ರಣತಂತ್ರ ಹೆಣೆಸಿದ್ದಾರೆ. ಅಲ್ಲದೆ, ಕಾಂಗ್ರೆಸ್ನ ಪದ್ಮಾವತಿ ಸಮುದಾಯದಲ್ಲಿ ಕುರುಬ. ಎಂಟಿಬಿ ಕೂಡ ಕುರುಬ ಸಮುದಾಯದವರು. ಹೀಗಾಗಿ ಶರತ್ ಬಚ್ಚೇಗೌಡರಿಗೆ ಇದು ಪ್ಲಸ್ ಪಾಯಿಂಟ್ ಆಗೋ ಸಾಧ್ಯತೆ ಇದೆ. ಹೊಸಕೋಟೆ ಕ್ಷೇತ್ರದಲ್ಲಿ ಗೌಡ ಮತಗಳು ಹೆಚ್ಚಿನದಾಗಿವೆ. ಕುರುಬ ಸಮುದಾಯದ ಮತಗಳು ಕೂಡ ಎರಡನೇ ಸ್ಥಾನದಲ್ಲಿವೆ. ಇಲ್ಲಿ ಕುರುಬ ಮತಗಳು ಡಿವೈಡ್ ಆದ್ರೆ, ಶರತ್ ಗೆಲುವು ಸುಲಭವಾಗುತ್ತೆ.
ಅಲ್ಲದೆ, ಕೊನೆ ಕ್ಷಣದಲ್ಲಿ ಎಂಟಿಬಿ ನಾಗರಾಜ್ ದೋಸ್ತಿ ಸರ್ಕಾರಕ್ಕೆ ಕೈಕೊಟ್ಟು ಹೋಗಿದ್ದು ಡಿಕೆಶಿ ಮತ್ತು ಹೆಚ್ಡಿಕೆಗೆ ಕಾಡ್ತಿದೆ. ಈ ಹಿನ್ನೆಲೆಯಲ್ಲಿ ಹೇಗಾದ್ರೂ ಮಾಡಿ ಎಂಟಿಬಿಗೆ ಸೋಲು ಉಣಿಸಬೇಕು ಎಂದು ನಿರ್ಧರಿಸಿದಂತೆ ಕಾಣ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?