Featured
ಗೆದ್ದ ಅನರ್ಹರು..! ಗೆದ್ದು ಸೋತ ಸ್ಪೀಕರ್ : ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ..?

ನವದೆಹಲಿ : ಇಡೀ ದೇಶವೇ ಕುತೂಹಲದಿಂದ ಕಾಯ್ತಿದ್ದ ಅನರ್ಹ ಶಾಸಕರ ಪ್ರಕರಣದ ತೀರ್ಪು ಹೊರಬಿದ್ದಿದೆ. ಸ್ಪೀಕರ್ ನೀಡಿದ್ದ ಅನರ್ಹತೆ ಆದೇಶವನ್ನ ಎತ್ತಿಹಿಡಿದಿರೋ ಸುಪ್ರೀಂಕೋರ್ಟ್, ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಸಮತೋಲನದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಇದರಿಂದಾಗಿ ಸ್ಪೀಕರ್ ಗೆದ್ದು ಸೋತಿದ್ರೆ, ಅನರ್ಹರು ಕೂಡ ಗೆದ್ದಂತಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ..?
ಶಾಸಕರು ನೈತಿಕತೆಯಿಂದ ವರ್ತಿಸಬೇಕು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಕೂಡ ನೈತಿಕತೆ ಪ್ರದರ್ಶನ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ನೈತಿಕತೆ ಇಲ್ಲದೇ ಹೋದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ.
ಸ್ಪೀಕರ್ಗೆ ಶಾಸಕರನ್ನು ಅನರ್ಹ ಗೊಳಿಸುವ ಅಧಿಕಾರವಿದೆ. ಹೀಗಾಗಿ, ಸ್ಪೀಕರ್ ಕೊಟ್ಟಿದ್ದ ಅನರ್ಹತೆ ಆದೇಶವನ್ನ ಎತ್ತಿಹಿಡಿಯಲಾಗಿದೆ. ಆದ್ರೆ, ಇಂತಿಷ್ಟೇ ಅವಧಿಗೆ ಅನರ್ಹತೆ ಮಾಡುವ ಅಧಿಕಾರ ಸ್ಪೀಕರ್ಗೆ ಇಲ್ಲ.
ಶಾಸಕರು ಅನರ್ಹಗೊಂಡಿದ್ದಾರೆ. ಹೀಗಾಗಿ, ಮತ್ತೆ ಶಾಸಕರಾಗಬೇಕು. ಸ್ಪೀಕರ್ ಆದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಅಂಶವಿಲ್ಲ. ಹೀಗಾಗಿ, ಅನರ್ಹರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು.
ಶೆಡ್ಯೂಲ್ 25A ಪ್ರಕಾರ ಸ್ಪೀಕರ್, ಅನರ್ಹತೆ ಅವಧಿ ನಿರ್ಧರಿಸುವಂತಿಲ್ಲ. ಹೀಗಾಗಿ 2023ರವರೆಗೆ ಶಾಸಕರ ಅನರ್ಹತೆ ಸರಿಯಲ್ಲ.
ಒಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಪು, ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಕೊಟ್ಟಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮೇಲೆ ಸಚಿವರಾಗಬಹುದು. ಅಲ್ಲವರೆಗೆ ಸಚಿವ ಸ್ಥಾನ ಸಿಗಲ್ಲ ಅನ್ನೋದೊಂದೆ ಅನರ್ಹರಿಗೆ ಮೈನಸ್. ಉಳಿದಂತೆ ಎಲ್ಲವೂ ಅನರ್ಹರಿಗೆ ಪ್ಲಸ್ ಅಂದ್ರೆ ತಪ್ಪಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?