Featured
ಬಚ್ಚೇಗೌಡ ಒಪ್ಪಿದ್ದರಿಂದಲೇ ರಾಜೀನಾಮೆ ಕೊಟ್ಟೆ : ಈಗ ಅಪ್ಪ-ಮಗ ನಾಟಕ ಆಡ್ತಿದ್ದಾರೆ, MTB ನಾಗರಾಜ್ ಸ್ಫೋಟಕ ಹೇಳಿಕೆ

ಬೆಂಗಳೂರು/ಹೊಸಕೋಟೆ : ಸಿಎಂ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಜೊತೆ ಒಪ್ಪಂದವಾಗಿತ್ತು. ಬಿ.ಎನ್. ಬಚ್ಚೇಗೌಡ ಒಪ್ಪಿದ ಮೇಲೆಯೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರೋದಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮುಖಂಡರ ಮನೆಯಲ್ಲಿ ಎಂಟಿಬಿ ನಾಗರಾಜ್, ಬಹಿರಂಗವಾಗಿ ಸತ್ಯ ಹೊರಹಾಕಿದ್ದಾರೆ.
ತಾನು ಬಿಜೆಪಿಯಿಂದ ಸ್ಪರ್ಧೆ ಮಾಡಲು, ಬಿಜೆಪಿಗೆ ಸೇರ್ಪಡೆಯಾಗಲು, ಬಚ್ಚೇಗೌಡರು ಒಪ್ಪಿಕೊಂಡಿದ್ರು. ಆದ್ರೀಗ, ಉಲ್ಟಾ ಹೊಡೆಯುತ್ತಿದ್ದಾರೆ. ಬಿಜೆಪಿ ಟಿಕೆಟ್ ಬದಲಾಗಿ ಗೃಹಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೂ, ಶರತ್ ಬಚ್ಚೇಗೌಡ ತಿರಸ್ಕರಿಸಿದ್ದಾರೆ. ಇದರಿಂದಾಗಿ ಸ್ಪಷ್ಟವಾಗಿ ಗೊತ್ತಾಗುತ್ತೆ, ಬಚ್ಚೇಗೌಡ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಎಂಟಿಬಿ ನಾಗರಾಜ್ ಗಂಭೀರ ಆರೋಪ ಮಾಡಿದ್ರು.
ಒಂದು ಶರತ್ ಬಚ್ಚೇಗೌಡ ಗೆಲ್ಲಬೇಕು, ಇಲ್ಲವೇ ಕಾಂಗ್ರೆಸ್ ಗೆಲ್ಲಬೇಕು. ಯಾವುದೇ ಕಾರಣಕ್ಕೂ ಎಂಟಿಬಿ ನಾಗರಾಜ್ ಗೆಲ್ಲಬಾರದು ಎಂದು ಅಪ್ಪ-ಮಗ ಒಪ್ಪಂದ ಮಾಡಿಕೊಂಡಿದ್ದಾರೆ. ನನ್ನ ವಿರುದ್ಧ ಒಳತಂತ್ರ ಮಾಡಿದ್ದಾರೆಂದು ನಾಗರಾಜ್ ಆರೋಪಿಸಿದ್ರು.
ಮೊದಲೇ ಒಪ್ಪಂದ ಮಾಡಿಕೊಂಡತೆ, ನಾವು ಮೂರು ಜನ. ಅಂದ್ರೆ, ಬಚ್ಚೇಗೌಡ, ಅವರ ಮಗ ಶರತ್ ಹಾಗೂ ನಾನು ಸೇರಿ ಹೊಸಕೋಟೆಯನ್ನ ಅಭಿವೃದ್ಧಿ ಮಾಡಬೇಕು. ಆದ್ರೆ, ಈಗ ಮಾತು ತಪ್ಪುತ್ತಿರೋದು ಸರಿಯಲ್ಲ ಎಂದು ಎಂಟಿಬಿ ನಾಗರಾಜ್ ಬೇಸರ ಹೊರಹಾಕಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?