ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 100 ದಿನ ಆಡಳಿತ ಪೂರೈಸಿದೆ. ಆದ್ರೆ, ಜನರಿಗೆ ಉಪಯೋಗ ಆಗುವಂತ, ಯಾವುದೇ ಒಳ್ಳೇ ಕೆಲಸ ಯಡಿಯೂರಪ್ಪ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತ್ನಾಡಿದ ಹೆಚ್.ಡಿ. ಕುಮಾರಸ್ವಾಮಿ, ಬೈ ಎಲೆಕ್ಷನ್ ಮಾತ್ರವಲ್ಲ, ಮಧ್ಯಂತರ ಚುನಾವಣೆ ಬಂದರೂ ಯಾರ ಜತೆಗೂ ಒಪ್ಪಂದ ಮಾಡಿಕೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದ್ರು. ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ ಮಾಡಲಿದೆ ಎಂದ್ರು.
ಇದೇ ವೇಳೆ, ತಮ್ಮದೇ ಪಕ್ಷದ ಶಾಸಕರು ನನ್ನ ವಿರುದ್ದ ಸಿಟ್ಟು ಮಾಡಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಚಿಕಿತ್ಸೆ ನೀಡಲು ರೋಗ ಏನು ಅಂತ ಬಂದು ಹೇಳ್ಕೊಂಡ್ರೆ ತಾನೆ ಗೊತ್ತಾಗೋದು..? ಏನ್ ರೋಗ ಅಂತ ಹೇಳದೇ ಇದ್ರೆ ಹೇಗೆ ಅರ್ಥ ಆಗುತ್ತೆ ಎಂದು ಜೆಡಿಎಸ್ ಭಿನ್ನಮತಿಯರ ಬಗ್ಗೆ ಹೆಚ್ಡಿಕೆ ವ್ಯಂಗ್ಯವಾಡಿದ್ರು.
ಇಷ್ಟೇ ಅಲ್ದೆ, ಯಡಿಯೂರಪ್ಪ ರವರ ಆಡಿಯೋ ಎಲ್ಲಾ ಕಡೆ ಹರಿದಾಡ್ತಿದೆ. ಇದಕ್ಕೆ ಏನ್ ಹೇಳ್ತಾರೆ ಯಡಿಯೂರಪ್ಪನರವರು. ಸಿಎಂ ಸ್ಥಾನ ಬೇಡ ಆಗಿತ್ತು ಅಂತ ಯಡಿಯೂರಪ್ಪ ಹೇಳ್ತಾ ಇದ್ದಾರೆ. ಈ ಆಡಿಯೋ ಅನ್ನ ನಮ್ಮ ವಕೀಲರು, ಕೋರ್ಟ್ಗೆ ನೀಡಿದ್ದಾರೆ. ಮುಂದೇನು ಆಗುತ್ತೆ ಕಾದುನೋಡೋಣ ಅಂದ್ರು.
ಯಡಿಯೂರಪ್ಪ ಭೇಟಿ ಆಕಸ್ಮಿಕ, ಇದಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿಲ್ಲ. ರಾಜಕೀಯ ಚರ್ಚೆ ಆಗಿಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ಸ್ಪಷ್ಟನೆ ನೀಡಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?