Featured
#ByElections : ಅನರ್ಹ ಶಾಸಕರಿಗೆ ಸಿಹಿಯೋ..? ಕಹಿಯೋ..? : ಇವತ್ತೇ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಾ..?

ನವದೆಹಲಿ/ಬೆಂಗಳೂರು : ಉಪ ಚುನಾವಣೆ ಘೋಷಣೆ ಆಗಿದ್ದೇ ತಡ, ಅನರ್ಹ ಶಾಸಕರ ಎದೆಯಲ್ಲಿ ಢವ ಢವ ಶುರುವಾಗಿದೆ. 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಚುನಾವಣೆ ಘೋಷಣೆ ಆಗಿದೆ. ಆದ್ರೆ, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾ..? ಮಾಡಬಾರದ ಅನ್ನೋ ಕ್ಲಾರಿಟಿ ಇನ್ನೂ ಸಿಕ್ಕಿಲ್ಲ. ಇವರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದ್ದು, ಯಾವುದೇ ಆದೇಶ ಬಂದಿಲ್ಲ. ಇವತ್ತು ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಪ್ರಕರಣ ವಿಚಾರಣೆಗೆ ಬರಲಿದ್ದು, ಇವತ್ತೇ ತೀರ್ಪು ಬರುತ್ತಾ..? ಅಥವಾ ಮತ್ತೆ ಮುಂದೂಡಿಕೆ ಆಗುತ್ತಾ ಅನ್ನೋ ಕುತೂಹಲ ಮೂಡಿಸಿದೆ.
ಒಂದ್ವೇಳೆ ಸುಪ್ರೀಂಕೋರ್ಟ್ ಏನಾದ್ರು ಅನರ್ಹ ಶಾಸಕರ ಪ್ರಕರಣದ ವಿಚಾರಣೆಯನ್ನ ಮುಂದೂಡಿದ್ರೆ, ಅನರ್ಹ ಶಾಸಕರು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಜೊತೆಗೆ ಸ್ಪೀಕರ್ ಆದೇಶವನ್ನ ಎತ್ತಿ ಹಿಡಿದು, ಚುನಾವಣೆಗೆ ಸ್ಪರ್ಧೆ ಮಾಡಬಾರದು ಅಂತ ತೀರ್ಪು ಬಂದ್ರೂ, ಅನರ್ಹರ ರಾಜಕೀಯ ಜೀವನ ಮುಗಿದು ಹೋಗುತ್ತೆ. ಹೀಗಾಗಿ, ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತೆ ಅನ್ನೋದರ ಮೇಲೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿಂತಿದೆ. ಇದರ ಜೊತೆ ಬಿಜೆಪಿ ಸರ್ಕಾರಕ್ಕೂ ಕಂಟಕ ಆಗೋ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್ ಇವತ್ತು ಅನರ್ಹ ಶಾಸಕರ ಪರ ತೀರ್ಪು ಕೊಟ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಹಿನ್ನಡೆಯಾಗಲಿದೆ. ಅನರ್ಹ ಶಾಸಕರು ಗೆದ್ರೆ, ಬಿಜೆಪಿ ಸರ್ಕಾರ ಫುಲ್ ಸೇಫ್ ಆಗುತ್ತೆ. ಈಗಾಗ್ಲೇ ದೆಹಲಿಗೆ ಕೆಲವು ಅನರ್ಹ ಶಾಸಕರು ಹೋಗಿದ್ದು, ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ಡಿಕೆಶಿ ಪ್ರಕರಣದಲ್ಲಿ ವಾದ ಮಂಡಿಸ್ತಿರೋ ಮುಕುಲ್ ರೋಹಟಗಿ ಅವರೇ, ಅನರ್ಹ ಶಾಸಕರ ಪ್ರಕರಣವನ್ನೂ ವಾದ ಮಾಡ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?