Featured
ನಟ ನಾಗಾರ್ಜುನ ತೋಟದಲ್ಲಿ ಶವ ಪತ್ತೆ..!

ಹೈದ್ರಾಬಾದ್: ತೆಲುಗು ಚಿತ್ರನಟ ಅಕ್ಕಿನೇನಿ ನಾಗಾರ್ಜುನನ ತೋಟದಲ್ಲೊಂದು ಕೊಳೆತ ರೀತಿಯ ದೇಹ ಸಿಕ್ಕಿದ್ದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಹೈದ್ರಾಬಾದ್ ಹೊರವಲಯದಲ್ಲಿರುವ ನಾಗಾರ್ಜುನ ತೋಟಕ್ಕೆ ಮೊನ್ನೆ ಆಳುಗಳನ್ನ ಕಳುಹಿಸಲಾಗಿತ್ತು ಆಗ ಈ ದೇಹ ಬಿದ್ದಿರುವುದು ಗಮನಕ್ಕೆ ಬಂದಿದೆ.
ನಾಗಾರ್ಜುನ ಹಾಗೂ ಅಮಲ ಗೆ ಸೇರಿದ ಸುಮಾರು ನಲವತ್ತು ಎಕರೆ ಜಾಗವನ್ನ ಹಾಳುಬಿಡಲಾಗಿತ್ತು, ಬುಧವಾರ ತೋಟದಲ್ಲಿ ಕೃಷಿ ಮಾಡಲು ಸ್ವಚ್ಛಗೊಳಿಸಲು ಆಳುಗಳನ್ನ ಕಳುಹಿಸಲಾಗಿತ್ತು, ಆಗ ಕೊಳೆತ ವಾಸನೆ ಬಂದಿದ್ದರಿಂದ ಆ ಜಾಡು ಹಿಡಿದು ಹೋದಾಗ ಶವ ಸಿಕ್ಕಿದೆ, ಕೂಡಲೇ ಪೊಲೀಸರಿಗೆ ಫೊನ್ ಮಾಡಿ ತಿಳಿಸಿದ್ದಾರೆ. ದೇಹದ ಗುರುತು ಪತ್ತೆ ಹಚ್ಚಿರುವ ಪೊಲೀಸರು, ಸ್ಥಳೀಯ ನಿವಾಸಿ ಚಕ್ಕಳಿ ಪಂಡು (೩೦) ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
Post Views: 3
Continue Reading
Advertisement
You may like
Click to comment
















