ಮೈಸೂರು : ದಸರಾ ಅಂದ್ರೆ ಸಂಸ್ಕೃತಿ, ವೈಭವ, ಅದ್ಧೂರಿತನ.. ಇದರ ಜೊತೆ ಮೋಜು, ಮಸ್ತಿಯೂ ಇರುತ್ತೆ. ಯುವ ದಸರಾ ಅಂತೂ ಯೂತ್ ಫೇವರಿಟ್. ಇದರ ಜೊತೆ ಸ್ಟ್ರೀಟ್ ಫೆಸ್ಟಿವಲ್ ಕೂಡ ದಸರಾ ಆರ್ಕಷಣೆ ಅಂದ್ರೆ, ತಪ್ಪಲ್ಲ. ಆದ್ರೆ, ಈ ವರ್ಷ ಸ್ಟ್ರೀಟ್ ಫೆಸ್ಟಿವಲ್ ರದ್ದು ಮಾಡಲಾಗಿದೆ ಎಂದು ಮೈಸೂರು ಡಿಸಿ ಅಭಿರಾಮ್ ಶಂಕರ್ ಹೇಳಿದ್ದಾರೆ.
ಕಳೆದ ವರ್ಷ ದಸರಾ ಸ್ಟ್ರೀಟ್ ಫೆಸ್ಟಿವಲ್ನಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿದ್ವು. ಹೀಗಾಗಿ, ಈ ವರ್ಷ ಸ್ಟ್ರೀಟ್ ಫೆಸ್ಟಿವಲ್ ರದ್ದು ಮಾಡ್ತಿರೋದಾಗಿ ಡಿಸಿ ಹೇಳಿದ್ದಾರೆ. ಸ್ಟ್ರೀಟ್ ಫೆಸ್ಟಿವಲ್ ಬದಲಿಗೆ, ಈ ವರ್ಷ ಚಿತ್ರಸಂತೆ ಹಾಗೂ ಹಸಿರುಸಂತೆ ಆಯೋಜನೆ ಮಾಡಲಾಗ್ತಿದೆ. ಸಾವರ್ಜನಿಕರು, ಪ್ರವಾಸಿಗರ ಹಿತದೃಷ್ಟಿಯಿಂದ ಸ್ಟ್ರೀಟ್ ಫೆಸ್ಟ್ ಮಾದರಿ ಬದಲು ಮಾಡಲಾಗ್ತಿದೆ ಎಂದು ಡಿಸಿ ಹೇಳಿದ್ದಾರೆ.
ಸಂಜೆ 5 ಗಂಟೆಯೊಳಗೆ ಚಿತ್ರಸಂತೆ ಮತ್ತು ಹಸಿರುಸಂತೆ ಮುಕ್ತಾಯವಾಗುತ್ತೆ. ಇದರ ಉದ್ದೇಶ ಕರಕುಶಲಕರ್ಮಿಗಳೂ, ರೈತರು, ಕಲಾವಿದರನ್ನ ಪ್ರೋತ್ಸಾಹಿಸೋದು ಎನ್ನಲಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?