Connect with us

Featured

ಶಿವಮೊಗ್ಗದ ಈ ಹಳ್ಳಿ ಮಾಲ್ಗುಡಿ ರೈಲು ನಿಲ್ದಾಣವಾಗಲಿದೆ: ಶಂಕರ್‌ ನೆನಪು ಹಸಿರಾಗಿಸುವ ಪ್ರಯತ್ನ ಸಾಗಿದೆ

ಶಿವಮೊಗ್ಗ: ಮುಂಜಾನೆಯ ಮಂಜು ಕವಿದ ಕಾನೂರು, ಮಧ್ಯದಲ್ಲೊಂದು ಮೀಟರ್‌ಗೇಜ್‌ ಪುಟ್ಟ ರೈಲು, ಹೊಲಗದ್ದೆ, ಶಾಲೆ, ಹಳ್ಳಿಸೊಗಡಿನ ಮುಗ್ಧ ಜನರು, ಅಕ್ಕಪಕ್ಕದಲ್ಲಿ ಹರಿಯುವ ಹೊಳೆ-ತೊರೆ. ಇಷ್ಟರಲ್ಲೇ ಮಾಲ್ಗುಡಿ ಡೇಸ್‌ ಧಾರಾವಾಹಿಯ ಶೇ.೩೦ರಷ್ಟು ಭಾಗ ಚಿತ್ರೀಕರಣ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮೇರು ನಟ ದಿ.ಶಂಕರ್‌ನಾಗ, ಪ್ರತೀ ಕನ್ನಡಿಗನ ಹೃದಯದಲ್ಲೂ ಚಿರಸ್ಥಾಯಿ. ಈಗ ಈ ಹಳ್ಳಿ ನಿಧಾನವಾಗಿ ಮಾಲ್ಗುಡಿಯಾಗುವತ್ತ ದಾಪುಗಾಲು ಹಾಕುತ್ತಿದೆ.

ಅರಸಾಳು ಎಂಬ ಸುಂದರ ಹಳ್ಳಿಯ ಮಧ್ಯೆ ಒಂದು ಪುಟ್ಟ ರೈಲು ನಿಲ್ದಾಣ ಇದೆ, ಈಗ ಅದು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತನೆಯಾಗುತ್ತಿದೆ. ಅಂದು ಮಾಲ್ಗುಡಿ ಡೇಸ್‌ಗೆ ಕಲಾನಿರ್ದೇಶಕನಾಗಿದ್ದ ಜಾನ್‌ ದೇವರಾಜ ಎಂಬುವರು ಮಾಲ್ಗುಡಿ ಮ್ಯೂಸಿಯಂ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನೇನು ಒಂದು ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಈ ರೈಲು ನಿಲ್ದಾಣವನ್ನ ಮಾಲ್ಗುಡಿ ನಿಲ್ದಾಣ ಅಂದು ಕರೆಯಬಹುದು.

ಭಾರತದ ಸುಪ್ರಸಿದ್ಧ ಲೇಖಕ ಆರ್‌ ಕೆ ನಾರಾಯಣ್‌ ಬರೆದ ʻಮಾಲ್ಗುಡಿ ಡೇಸ್‌ ʼ ಪುಸ್ತಕವನ್ನ ದೃಶ್ಯವಾಗಿ ಕಟ್ಟಿಕೊಟ್ಟ ಕೀರ್ತಿ ಶಂಕರ್‌ನಾಗ್‌ರದ್ದು, ದೂರದರ್ಶನಲ್ಲಿ ೧೯೮೦-೯೦ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಎಲ್ಲರ ಮನೆಮಾತಾಗಿತ್ತು. ಮಾಲ್ಗುಡಿ ಎಂಬ ಊರು ಎಲ್ಲಿಯೂ ಇಲ್ಲ, ಇದೊಂದು ದಕ್ಷಿಣ ಭಾರತದ ಒಂದು ಹಳ್ಳಿಯ ಕಲ್ಪನೆ, ಆದರೆ ಶಂಕರ್‌ನಾಗ್‌ ಅರಸಾಳು ಹಾಗೂ ಆಗುಂಬೆ ಭಾಗದಲ್ಲಿ ಧಾರಾವಾಹಿ ಚಿತ್ರೀಕರಣ ಮಾಡಿದ್ದರು, ಈ ಧಾರಾವಾಹಿ ನೋಡಿ ಮೆಚ್ಚಿಕೊಂಡಿದ್ದ ಆರ್‌ಕೆ ನಾರಾಯಣ್‌, ಶಂಕರ್‌ನಾಗ್‌ ಮಾಲ್ಗುಡಿ ಹುಡುಕಿಕೊಟ್ಟರು ಎಂದು ಮನಸಾರೆ ಮೆಚ್ಚಿಕೊಂಡಿದ್ದರು.

ಅಂದು ಅರಸಾಳು ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಲ್ಲಿಗೆ ಮಾಲ್ಗುಡಿ ಎಂದು ಮರು ನಾಮಕರಣಕ್ಕೆ ರೈಲ್ವೆ ಇಲಾಖೆಗೆ ಮನವಿ ಮಾಡಿರುವುದಾಗಿ ಹೇಳಿದ್ದರು. ಅದರ ಮೊದಲ ಹಂತವಾಗಿ ಮಾಲ್ಗುಡಿ ಮ್ಯೂಸಿಯಂ ಸಿದ್ಧವಾಗುತ್ತಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ