ಶಿವಮೊಗ್ಗ ಹಿಂದೂಮಹಾಸಭಾ ಗಣಪತಿ ರಾಜಬೀದಿ ಉತ್ಸವ : ಸರ್ವಂ ಕೇಸರಿ ಮಯಂ..!
ಶಿವಮೊಗ್ಗ: ರಾಜ್ಯದಲ್ಲೇ ಅಬ್ಬರದ ಗಣೇಶ ಉತ್ಸವ ಎಂದು ಖ್ಯಾತಿ ಪಡೆದ ಶಿವಮೊಗ್ಗದ ಹಿಂದೂಮಹಾಸಭಾ ಗಣಪತಿ ಉತ್ಸವ ಸಾಂಗವಾಗಿ ಸಹಸ್ರಾರು ಭಕ್ತಗಣ ಸಮೂಹದಲ್ಲಿ ನಡೆಯುತ್ತಿದೆ.
ನಿಮ್ಮಜ್ಜನದ ದಿನವಾದ ಇಂದು ಕೋಟೆ ಆಂಜನೇಯನ ಸನ್ನಿಧಿಯಿಂದ ಶಾಸ್ತ್ರೋಕ್ತವಾಗಿ ಟ್ರ್ಯಾಕ್ಟರ್ ಮೇಲೆ ಮರುಪ್ರತಿಷ್ಠಾಪನೆ ಮಾಡಿ ರಾಜಬೀದಿ ಉತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತಿದೆ.
ಹಿಂದೂಮಹಾಸಭಾ ಪ್ರತಿಷ್ಠಾಪನೆ ಮಾಡುತ್ತಿರುವ ೭೫ನೇ ಗಣಪತಿ ಇದಾಗಿದ್ದು ಸಹಜವಾಗಿ ಸಾಕಷ್ಟು ಜನರು ಆಗಮಿಸಿದ್ದಾರೆ. ಅಂದಾಜಿನ ಪ್ರಕಾರ ನಲವತ್ತು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದಾರೆ.
ಕೋಟೆ ಆಂಜನೇಯ ಸನ್ನಿಧಿಯಿಂದ ಗಾಂಧಿ ಬಜಾರ್ ಮೂಲಕ, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿ ಗುಡಿ ರಸ್ತೆ, ಜೈಲ್ ಸರ್ಕಲ್, ಶಿವಮೂರ್ತಿ ಸರ್ಕಲ್, ಕೋರ್ಟ್ ಸರ್ಕಲ್ ಮೂಲಕ ಪುನಃ ತುಂಗಾನದಿ ತಡಕ್ಕೆ ತಂದು ಅಲ್ಲಿ ವಿಸರ್ಜನೆ ಮಾಡಲಾಗುತ್ತೆ.
ಅಷ್ಟರಲ್ಲಿ ಮಧ್ಯರಾತ್ರಿಯಾಗಬಹುದು ಎಂದು ಹಿಂದೂಮಹಾಸಭಾ ಸಮಿತಿ ಸದಸ್ಯರು ಹೇಳಿದ್ದಾರೆ.