Featured
ಇಡಿ ವಿಚಾರಣೆಗೆ ಡಿಕೆಶಿ ಪುತ್ರಿ : ಮಗಳು ಐಶ್ವರ್ಯಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್

ನವದೆಹಲಿ : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿಯಾಗಿರೋ ಡಿಕೆ ಶಿವಕುಮಾರ್ ಇಡಿ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಈ ಮಧ್ಯೆ, ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನ ಇಡಿ ವಿಚಾರಣೆ ನಡೆಸ್ತಿದೆ. ಇವತ್ತು ದೆಹಲಿಯ ಇಡಿ ಕಚೇರಿಗೆ ಆಗಮಿಸಿರೋ ಡಿಕೆಶಿ ಪುತ್ರಿ ಐಶ್ವರ್ಯ, ಇಡಿ ವಿಚಾರಣೆಗೂ ಮುನ್ನ ತಂದೆ ಜೊತೆ ಮಾತುಕತೆ ನಡೆಸಿದ್ರು.
ಈ ವೇಳೆ, ಪುತ್ರಿ ಐಶ್ವರ್ಯಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್, ಯಾವುದೇ ರೀತಿಯ ಭಯ ಬೇಡ. ಇಡಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಧೈರ್ಯವಾಗಿ ಉತ್ತರಿಸು ಎಂದು ಆತ್ಮಸ್ಥೈರ್ಯ ತುಂಬಿದ್ರು. ಒಂದೆಡೆ ಡಿಕೆಶಿ ವಿಚಾರಣೆ ನಡೆದ್ರೆ, ಮತ್ತೊಂದೆಡೆ ಮಗಳು ಐಶ್ವರ್ಯ ವಿಚಾರಣೆಯನ್ನ ಇಡಿ ಅಧಿಕಾರಿಗಳು ಮಾಡಲಿದ್ದಾರೆ.
ಡಿಕೆಶಿ ಬಂಧನದ ಬಳಿಕ, ಪುತ್ರಿ ಐಶ್ವರ್ಯಗೂ ಇಡಿ ಸಮನ್ಸ್ ನೀಡಿತ್ತು. 108 ಕೋಟಿ ಆಸ್ತಿ ಒಡತಿಯಾಗಿರೋ ಐಶ್ವರ್ಯ, ಇಷ್ಟೊಂದು ಆಸ್ತಿ ಸಂಪಾದನೆ ಮಾಡಿದ್ದು ಹೇಗೆ ಎನ್ನುವ ಕುರಿತು ಇಡಿ, ವಿಚಾರಣೆ ಮಾಡ್ತಿದೆ.
You may like
ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರಂಭ : ಕುಮಾರಸ್ವಾಮಿ ಆರೋಪ
ಡಿಕೆಶಿ ಮನೆಯಲ್ಲಿ ವಿಶೇಷ ಸಭೆ- ಪಕ್ಷ ಸಂಘಟನೆ ಕುರಿತು ಚರ್ಚೆ
ಸೋನಿಯಾ ಗಾಂಧಿ ತುಂಬಿದ ಧೈರ್ಯದಿಂದ ಆತ್ಮವಿಶ್ವಾಸ ಇಮ್ಮಡಿಯಾಯ್ತು – ಭಾಷಣದಲ್ಲಿ ಭಾವುಕರಾದ ಡಿಕೆಶಿ
ಕರ್ನಾಟಕ ಕಾಂಗ್ರೆಸ್ನಲ್ಲಿ ಹೊಸ ಸಂಚಲನ – ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್ಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ – ಶ್ರೀ ಕ್ಷೇತ್ರದದಲ್ಲಿ ವಿಶೇಷ ಪೂಜೆ – ಧರ್ಮಾಧಿಕಾರಿಗಳೇ ಕಳುಹಿಸಿಕೊಟ್ರು ಪ್ರಸಾದ
ಪ್ರತಿಜ್ಞಾಗೆ ಭಾರೀ ಸಿದ್ಧತೆ – ಕಾರ್ಯಕರ್ತರಿಗೆ ತಮ್ಮ ತಮ್ಮ ಸ್ಥಳದಿಂದಲೇ ಆಶೀರ್ವದಿಸಲು ಡಿಕೆಶಿ ಮನವಿ