Featured
ಫೈನ್ ಕಡಿಮೆ ಮಾಡಿದ್ರೆ ರಾಜ್ಯಗಳೇ ಹೊಣೆ : ನಿತಿನ್ ಗಡ್ಕರಿ ಕೊಡ್ಡ ಎಚ್ಚರಿಕೆ ಏನು..?

ನವದೆಹಲಿ : ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿರೋ ಸಂಚಾರಿ ನಿಯಮ ಉಲ್ಲಂಘನೆಯಾದ್ರೆ, ದುಬಾರಿ ದಂಡ ವಿಧಿಸೋದು. ದುಬಾರಿ ದಂಡಕ್ಕೆ ಕೆಲವು ಸ್ವಾಗತ ಕೋರಿದ್ರೆ, ಹಲವ್ರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಗುಜರಾತ್ ಸರ್ಕಾರ ದಂಡವನ್ನ ಶೇಕಡಾ 50ರಷ್ಟು ಕಡಿತ ಮಾಡಿದೆ. ಇದೇ ವಿಚಾರ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೋಪಕ್ಕೆ ಕಾರಣವಾಗಿದೆ.
ಕೇಂದ್ರದ ಬಿಜೆಪಿ ಸರ್ಕಾರದ ನಿಯಮವನ್ನೇ ಗುಜರಾತ್ ಬಿಜೆಪಿ ಸರ್ಕಾರ ಪಾಲನೆ ಮಾಡದೇ ಇರೋದಕ್ಕೆ ಗಡ್ಕರಿ ಸಿಟ್ಟಾಗಿದ್ದಾರೆ. ಈ ಕುರಿತು ಮಾತ್ನಾಡಿರೋ ಗಡ್ಕರಿ, ಯಾವ ಯಾವ ರಾಜ್ಯಗಳಲ್ಲಿ ದಂಡ ಜಾರಿಗೆ ತರಲು ಹಿಂದೇಟು ಹಾಕ್ತಿದ್ದಾರೋ, ಅಥವಾ ದಂಡವನ್ನ ಕಡಿತ ಮಾಡ್ತಿದ್ದಾರೋ, ಮುಂದಿನ ಆಗುಹೋಗುಗಳಿಗೆ ಅವರೇ ಹೊಣೆ ಎಂದಿದ್ದಾರೆ. ಇದೇ ವೇಳೆ, ಜೀವನಕ್ಕಿಂತಲೂ ಹಣವೇ ಮುಖ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ. ಜನರ ಜೀವ ಉಳಿಸಲು ಮಾಡಿರೋ ಕಾಯ್ದೆ ಇದು, ಹಣಕ್ಕಾಗಿ ಅಲ್ಲ ಎಂದು ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಗಡ್ಕರಿ, ಜನರಿಗೆ ಕಾನೂನಿನ ಭಯ ಇರಬೇಕು. ನಿರ್ಭಯ ಪ್ರಕರಣಗಳಲ್ಲಿ ಅಪರಾಧಿಗೆ ಯಾಕೆ ಗಲ್ಲು ಶಿಕ್ಷೆ ವಿಧಿಸುತ್ತೇವೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರವನ್ನ ಗುಜರಾತ್ ಸರ್ಕಾರ ಅರ್ಧ ಮಾತ್ರ ಜಾರಿಗೆ ತಂದಿದೆ. ಇದೇ ವಿಚಾರವಾಗಿ ಈಗ ಕರ್ನಾಟಕ ಸೇರಿದಂತೆ ಮತ್ತಷ್ಟು ರಾಜ್ಯಗಳು ಗುಜರಾತ್ ಮಾದರಿಯನ್ನೇ ಅನುಸರಿಸಲು ಮುಂದಾಗಿವೆ. ಇದು ಮಾರಕ ಅನ್ನೋದು ಗಡ್ಕರಿ ವಾದ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















