Featured
ಯಡಿಯೂರಪ್ಪ ದೆಹಲಿಗೆ ಹೋಗಲಿಲ್ಲ ಯಾಕೆ..? BYSಗೆ ಮೋದಿ, ಅಮಿತ್ ಶಾ ಟೈಮ್ ಕೊಡ್ತಿಲ್ಲ ಯಾಕೆ..?

ಬೆಂಗಳೂರು/ದೆಹಲಿ : ಸಿಎಂ ಯಡಿಯೂರಪ್ಪ ಇವತ್ತು ದೆಹಲಿಗೆ ಹೋಗಬೇಕಿತ್ತು. ನಿನ್ನೆ ರಾತ್ರಿಯಷ್ಟೇ ಯಡಿಯೂರಪ್ಪ ದೆಹಲಿಗೆ ಹೋಗ್ತಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಆದ್ರೆ, ದಿಢೀರ್ ಅಂತ ಕೆಲವೇ ನಿಮಿಷಗಳಲ್ಲಿ ಯಡಿಯೂರಪ್ಪ ಅವರ ಟೂರ್ ಪ್ಲಾನ್ ಚೇಂಜ್ ಆಗೋಯ್ತು. ದೆಹಲಿ ಹೋಗಲ್ಲ, ನೆರೆಪೀಡಿತ ಪ್ರದೇಶಗಳತ್ತ ಯಡಿಯೂರಪ್ಪ ಪ್ರವಾಸ ಹೋಗಲಿದ್ದಾರೆ ಅನ್ನೋದು ಪಕ್ಕಾ ಆಯ್ತು.
ಇಷ್ಟಕ್ಕೂ ಯಡಿಯೂರಪ್ಪ ದೆಹಲಿ ಪ್ರವಾಸ ಕ್ಯಾನ್ಸಲ್ ಆಗೋದಕ್ಕೆ ಕಾರಣ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎನ್ನಲಾಗಿದೆ. ಇಬ್ಬರೂ ನಾಯಕರು ಕೂಡ ಯಡಿಯೂರಪ್ಪ ಭೇಟಿಯಾಗಲು ಸಮಯ ನೀಡಿಲ್ಲ ಎನ್ನಲಾಗಿದೆ. ಯಡಿಯೂರಪ್ಪ ಅವರನ್ನ ಭೇಟಿಯಾಗಲು ಮೋದಿ ಹಾಗೂ ಅಮಿತ್ ಶಾ ಇಬ್ಬರೂ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಮೊದಲು ನೆರೆ ಪೀಡಿತ ಪ್ರದೇಶಗಳಲ್ಲ ಹೋಗಿ, ಜನರ ಸಮಸ್ಯೆ ಕೇಳಿ. ಬಳಿಕ ದೆಹಲಿಗೆ ಬನ್ನಿ ಎನ್ನುವ ಸಂದೇಶ ನೀಡಿದ್ದಾರಂತೆ. ಜೊತೆಗೆ ಇನ್ನೂ ಕೂಡ, ಪ್ರವಾಹದ ಅಧ್ಯಯನದ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ. ವರದಿ ಕೊಡಿ, ಆಮೇಲೆ ಪರಿಹಾರ ಕೇಳಿ ಎನ್ನುವಂತೆ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಯಡಿಯೂರಪ್ಪಗೆ ಹೇಳಿದ್ದಾರಂತೆ. ಹೀಗಾಗಿಯೇ, ಯಡಿಯೂರಪ್ಪ ಅವರ ದೆಹಲಿ ಪ್ರವಾಸ ರದ್ದಾಗಿದೆ.
ಈ ನಡುವೆ, ಸಿಎಂ ಯಡಿಯೂರಪ್ಪ ಅವರನ್ನ ಬೇಕು ಅಂತಲೇ ರಾಷ್ಟ್ರೀಯ ನಾಯಕರು ನಿಯಂತ್ರಿಸುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ, ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರಿಗೆ ಬೇಡವಾದ ಶಿಶುನಾ..? ಅನ್ನೋ ಪ್ರಶ್ನೆ ಕಾಡ್ತಿದೆ. ಹೇಗೂ ಸಿಎಂ ಆಗಿರೋ ಯಡಿಯೂರಪ್ಪ ಇದನ್ನೆಲ್ಲ ಸಹಿಸಿಕೊಂಡಿದ್ದು, ಬೆಳಗಾವಿಯತ್ತ ಪಯಣ ಬೆಳೆಸಿದ್ದಾರೆ.
ಯಡಿಯೂರಪ್ಪ ಮೇಲಿನ ಮುನಿಸು ಇನ್ನೆಷ್ಟು ದಿನ ಇರುತ್ತೋ ಏನೋ..? ಕಾದುನೋಡೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?