Featured
ಬೆಂಗಳೂರಿನಲ್ಲಿ IFS ಅಧಿಕಾರಿ ಆತ್ಮಹತ್ಯೆ : ಕಾರಣವೇನು ಗೊತ್ತಾ..?

ಬೆಂಗಳೂರು : ಅರಣ್ಯ ಭವನದಲ್ಲಿ ಕರ್ತವ್ಯ ನಿರ್ವಸುತ್ತಿದ್ದ IFS ಅಧಿಕಾರಿ, ಅವತಾರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆಯಷ್ಟೇ, ಕೆಲಸಕ್ಕೆ ಹೋಗಿದ್ದ ಅವತಾರ್ ಸಿಂಗ್, ರಾತ್ರಿ ತಮ್ಮ ಯಲಹಂಕದ ಪ್ರೆಸ್ಟೀಜ್ ಮೌಂಟ್ ಕಾಲೋ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಯಲಹಂಕ ಪೊಲೀಸರು, ಡಿಸಿಪಿ ಭೀಮಾ ಶಂಕರ್ ಗುಳ್ಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಅವತಾರ್ ಸಿಂಗ್ ಯಾರು..?
ಅವತಾರ್ ಸಿಂಗ್, ಹರಿಯಾಣದವರು. 1967, ಏಪ್ರಿಲ್, 01ರಂದು ಜನಿಸಿದ್ರು. ಬಿಎಸ್ಸಿ ಪದವೀಧರರು. 50 ವರ್ಷದ ಅವತಾರ್ ಸಿಂಗ್, 1990ನೇ ಬ್ಯಾಚ್ ಅಧಿಕಾರಿ.
ಉತ್ತರ ಕನ್ನಡ, ಸೇರಿದಂತೆ ಹಲವೆಡೆ ಕಾರ್ಯ ನಿರ್ವಹಿಸಿದ್ರು.
ಅವತಾರ್ ಸಿಂಗ್ ಬೆಂಗಳೂರಿನ ಅರಣ್ಯಭವನದಲ್ಲಿ ಹೆಚ್ಚುವರಿ ಪ್ರಧಾನ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸ್ತಿದ್ರು. ಅರಣ್ಯ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿದ್ರು. ಕಳೆದ ವಾರವಷ್ಟೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಅರಣ್ಯಭವನಕ್ಕೆ ವರ್ಗವಾಗಿತ್ತು. ಕೋಲಾರ, ಚಿಕ್ಕಮಗಳೂರಿನಲ್ಲೂ ಕೆಲಸ ಮಾಡಿದ್ದರು.
ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಮಿತಭಾಷಿ, ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ.. ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನ್ನೋದು ಅವರ ಆತ್ಮೀಯ ಅಧಿಕಾರಿಗಳ, ಸಹೋದ್ಯೋಗಿಗಳ ಮಾತು.