Featured
ಯಡಿಯೂರಪ್ಪ ಅರೆಸ್ಟ್ ಆದಾಗ ನೀವು ಹೀಗೇ ಹೇಳಿದ್ರಾ..? ಸಚಿವ ಆರ್.ಅಶೋಕ್ ಮಾತಿನ ಅರ್ಥವೇನು..?

ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಬಂಧನ ವಿಚಾರವಾಗಿ, ಕಾಂಗ್ರೆಸ್ ವಿನಾಃ ಕಾರಣ ರಾಜಕೀಯವನ್ನ ಎಳೆದು ತರ್ತಿದೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ಆರ್.ಅಶೋಕ್, ಡಿಕೆಶಿ ಬಂಧನ ರಾಜಕೀಯ ಪ್ರೇರಿತ ಎಂದು ಆರೋಪ ಮಾಡ್ತಿರೋದು ಸರಿಯಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅರೆಸ್ಟ್ ಆಗಿದ್ರು, ಆಗಲೂ ನೀವು ಹೀಗೆಯೇ ಹೇಳ್ತಿದ್ರಾ ಎಂದು ಕಾಂಗ್ರೆಸ್ ನಾಯಕರನ್ನ ಪ್ರಶ್ನೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಬಂಧನಕ್ಕೂ ಕೇಂದ್ರ ಸರ್ಕಾರ ಅಥವಾ ಬಿಜೆಪಿ ನಾಯಕರಿಗೆ ಸಂಬಂಧಿವಿಲ್ಲ. ಇದನ್ನೇ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳೋದು ಒಳ್ಳೇದಲ್ಲ ಎಂದು ಅಶೋಕ್ ಹೇಳಿದ್ರು. ಜೊತೆಗೆ ಕಾಂಗ್ರೆಸ್ನವರು ಕಾನೂನನ್ನು ಕೈಗೆತೆಗೆದುಕೊಂಡು ಪ್ರತಿಭಟನೆ ಮಾಡೋದು ಸೂಕ್ತವಲ್ಲ. ಎಲ್ಲರಕ್ಕೂ ಕಾನೂನು, ಕೋರ್ಟ್ ಇದೆ. ಅದರ ಪಾಡಿಗೆ ಅದು ತನ್ನ ಕೆಲಸ ಮಾಡಿಕೊಂಡು ಹೋಗುತ್ತೆ ಎಂದು.
ಡಿಕೆಶಿ ಅವರನ್ನ ಅರೆಸ್ಟ್ ಮಾಡಿರೋ ಇಡಿ, 10 ದಿನಗಳ ಕಾಲ ವಿಚಾರಣೆ ನಡೆಸಲಿದೆ. ಸದ್ಯ ದೆಹಲಿಯ ಇಡಿ ಕಚೇರಿಯಲ್ಲಿ ಡಿಕೆಶಿ ವಿಚಾರಣೆ ನಡೆಯುತ್ತಿದ್ದು, ಸೆಪ್ಟೆಂಬರ್13ರವರೆಗೆ ಇಡಿ ಕಸ್ಟಡಿಯಲ್ಲೇ ಡಿಕೆಶಿ ಇರಲಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?