Featured
ಪ್ರವಾಹ ಅವಲೋಕನ ಮಾಡದ ಪ್ರಧಾನಿ ಚಂದ್ರಯಾನ ಸ್ಪರ್ಶ ವೀಕ್ಷಿಸಲು ಆಗಮನ: ಕಾಂಗ್ರೆಸ್ ಫ್ಲೆಕ್ಸ್

ಬೆಂಗಳೂರು/ ಹುಬ್ಬಳ್ಳಿ ಭಾರತದ ಬಾಹ್ಯಾಕಾಶ ಸಾಧನೆಗೆ ನಾಳೆಯೊಂದು ಮೈಲಿಗಲ್ಲು, ಕಾರಣ ತಿಂಗಳ ಹಿಂದೆ ( ಜುಲೈ ೨೨) ಹಾರಿಬಿಟ್ಟ ಚಂದ್ರಯಾನ ೨ ವ್ಯೋಮನೌಕೆ ಹಂತ ಹಂತವಾಗಿ ಚಂದ್ರನ ಕಕ್ಷೆಯತ್ತ ದಾಪುಗಾಲು ಹಾಕಿ ಈಗ ಕೊನೆಯ ಹಂತ ಅಂದರೆ ರೋವರ್ನ್ನ ಚಂದ್ರನ ಅಂಗಳಕ್ಕೆ ಇಳಿಸುವ ಕಾರ್ಯ ಬಾಕಿ ಇದೆ. ಈ ಹಂತವನ್ನ ನಾಳೆ ಯಶಸ್ವಿಯಾಗಿ ಪೂರೈಸಲು ವಿಜ್ಞಾನಿಗಳು ಕಾತರರಾಗಿದ್ದಾರೆ. ಈ ಕ್ಷಣವನ್ನ ಲೈವ್ ಆಗಿ ನೋಡಲು ಇಸ್ರೋದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಪ್ರಧಾನಿ ಮೋದಿಯ ವೇಳಾಪಟ್ಟಿ ಹೀಗಿದೆ
ನಾಳೆ ರಾತ್ರಿ ೯;೩೦ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಆಗಮನ, ರಾತ್ರಿ ಹತ್ತು ಗಂಟೆಗೆ ಇಸ್ರೋದ ಗೆಸ್ಟ್ ಹೌಸ್ನಲ್ಲಿ ವಿಶ್ರಾಂತಿ, ಮುಂಜಾನೆ ೧:೧೫ಕ್ಕೆ ಇಸ್ರೋ ಕಚೇರಿಗೆ ಆಗಮನ, ೧:೩೦ರಿಂದ ೭ರವರೆಗೆ ಇಸ್ರೋದಲ್ಲೇ ಇರಲಿದ್ದಾರೆ. ಮುಂಜಾನೆ ಪುನಃ ದೆಹಲಿಗೆ ವಾಪಸ್ ಆಗಲಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರು ಹೇಗಾದರೂ ಮಾಡಿ ಭೇಟಿ ಮಾಡುವ ಇರಾದೆ ಹೊಂದಿದ್ದಾರೆ.
ರಾಜ್ಯ ಪ್ರವಾಹಕ್ಕೆ ತತ್ತರಿಸಿದರೂ ಬಾರದ ಪ್ರಧಾನಿ ಚಂದ್ರಯಾನ ಸ್ಫರ್ಶ ನೋಡಲು ಆಗಮಿಸುತ್ತಿರುವುದು ಕಾಂಗ್ರೆಸ್ ನಾಯಕರಿಗೆ ಬೇಸರ ತಂದಿದ್ದು ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ವಿಭಿನ್ನ ರೀತಿಯ ಫ್ಲೆಕ್ಸ್ ಮಾಡಿಸಿದ್ದಾರೆ. ರಾಜ್ಯ ಪ್ರವಾಹದಿಂದ ತತ್ತರಿಸಿದರೂ ಬಾರದ ಇವರು ಚಂದ್ರಯಾನ ವೀಕ್ಷಣೆಗೆ ಆಗಮಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ಬಳಿ ಫ್ಲೆಕ್ಸ್ ಹಾಕಿದ್ದಾರೆ.
You may like
ಮಹದಾಯಿ ವಿಚಾರ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಮಾಜಿ ಸಚಿವ ದಿನೇಶ್ ಗುಂಡೂರಾವ್
ವಿಜಯಪುರದಲ್ಲಿ ಸತತ ಮಳೆ : ಡೋಣಿ ನದಿಯಲ್ಲಿ ನೀರು ಹೆಚ್ಚಳ
ಸುಸ್ಥಿಯಲ್ಲಿ ಚಂದ್ರಯಾನ -2 ಪ್ರಗ್ಯಾನ್ ರೋವರ್ ನೌಕೆ: ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಚೆನ್ನೈ ವಿಜ್ಞಾನಿ ಷಣ್ಮುಗ
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮೋದಿ ಗಡ್ಡ..! ಪ್ರಧಾನಿಯ ಉದ್ದಗಡ್ಡದ ಹಿಂದೆ ನಡೆಯುತ್ತಿದೆ ವಿಭಿನ್ನ ಚರ್ಚೆ..!
ಕೊಡಗಿನಲ್ಲಿ ಮತ್ತೆ ಭಾರೀ ಮಳೆ : ಪ್ರವಾಸಿಗರೇ ಎಚ್ಚರ ಎಚ್ಚರ..!
ಕೇಂದ್ರದಿಂದ ನೆರೆ ಪರಿಹಾರವಿಲ್ಲ, ಕಾಶ್ಮೀರದಲ್ಲಿ ಜೈಲು ಮಾಡಿದ್ದೇ ಸಾಹಸ : ಇದೆಂಥಾ ದೇಶಪ್ರೇಮ, ಸಿದ್ದು ಗುದ್ದು..!