ನವದೆಹಲಿ: ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ರನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ರೌಸ್ ಅವೆನ್ಯೂ ಕೋರ್ಟ್ಗೆ ಹಾಜರುಪಡಿಸಿದರು. ಡಿಕೆಶಿ ಪರ ವಾದ ಮಾಡಿ ಶತಾಯಗತಾಯ ಹೊರಗೆ ಕರೆತರಲು ಶ್ರಮಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರಯತ್ನ ವಿಫಲವಾಯ್ತು. ಅಂತಿಮವಾಗಿ ಕೋರ್ಟ್ ಒಂಬತ್ತು ದಿನಗಳ ಕಾಲ ಸೆ.೧೩ರವರೆಗೆ ಡಿಕೆ ಶಿವಕುಮಾರ್ ರನ್ನ ವಶಕ್ಕೆ ನೀಡಿತು.
ಕೋರ್ಟ್ ಆದೇಶದ ನಂತರ ಡಿಕೆ ಶಿವಕುಮಾರ್ ಟ್ವೀಟ್ ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾಗಿದೆ, ʻ ಕೊನೆಗೂ ನನ್ನನ್ನ ಬಂಧಿಸಲು ಸಫಲವಾದ ನನ್ನ ಬಿಜೆಪಿ ಸ್ನೇಹಿತರಿಗೆ ನಾನು ಅಭಿನಂದಿಸುತ್ತೇನೆ, ಐಟಿ-ಇಡಿ ಪ್ರಕರಣಗಳು ರಾಜಕೀಯ ಪ್ರೇರಿತ, ನಾನು ಬಿಜೆಪಿ ದ್ವೇಷ ರಾಜಕಾರಣಕ್ಕೆ ಬಲಿಯಾಗಿದ್ದೇನೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಕೂಡ ದ್ವೇಷ ರಾಜಕಾರಣವನ್ನಕುರಿತಾಗಿದೆ, ʻ ಡಿಕೆ ಶಿವಕುಮಾರ್ ಅರೆಸ್ಟ್ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಇನ್ನೊಂದು ಉದಾಹರಣೆʼ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಡಿಕೆ ಶಿವಕುಮಾರ್ ತನಿಖೆಗೆ ಸಹಕರಿಸುತ್ತಿದ್ರು, ಅವರೇನೂ ಓಡಿ ಹೋಗ್ತಿರಲಿಲ್ಲ, ಶಿವಕುಮಾರ್ಗೆ ಮಾನಸಿಕ ಕಿರುಕುಳ ನೀಡುವುದು ಹಾಗೂ ಪಕ್ಷದ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸುವ ಉದ್ದೇಶದಿಂದ ಬಂಧನವಾಗಿದೆ ಎಂದಿದ್ದಾರೆ.
ಗೆದ್ದ ಅನರ್ಹರು..! ಗೆದ್ದು ಸೋತ ಸ್ಪೀಕರ್ : ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನಿದೆ..?
ಆಸ್ಪತ್ರೆಯಿಂದ ಡಿಕೆಶಿ ಡಿಸ್ಚಾರ್ಜ್ : ನಿಮ್ಮೆಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದ ಡಿಕೆ
ಡಿಕೆಶಿಗೆ ಮತ್ತೆ ಸಂಕಷ್ಟ : ಆದ್ರೂ ಉನ್ನತ ಹುದ್ದೆ ಸಿಗುತ್ತೆ : ಡಿಕೆಶಿಗೆ ವಿನಯ್ ಗುರೂಜಿ ಅಭಯ.!
ಡಿಕೆ ಶಿವಕುಮಾರ್ಗೆ ಇವತ್ತೇ ಜಡ್ಜ್ಮೆಂಟ್ ಡೇ : ಜಾಮೀನು ಸಿಗುತ್ತಾ..? ಇಲ್ಲ ತಿಹಾರ್ ಜೈಲೇ ಗತಿನಾ..?
ನಮ್ಮನ್ನು ಮಾತುಗಳಲ್ಲೇ ರೇಪ್ ಮಾಡಿದ್ರು.. ರೆಸ್ಟೋರೆಂಟ್ನಲ್ಲಿ ಮೂವರು ಮಹಿಳೆಯರಿಂದ ದೂರು..!
ಡಿಕೆಶಿ ಆಯ್ತು, ಈಗ ಡಿಕೆ ಸುರೇಶ್ ಸರದಿ : ಡಿಕೆಸು ಕೂಡ ಅರೆಸ್ಟ್ ಆಗ್ತಾರಾ..?