Featured
ಆಪರೇಷನ್ ಕಮಲದ ಅಕ್ರಮ ಹಣದ ತನಿಖೆ ಯಾಕೆ ಮಾಡ್ತಿಲ್ಲ..? ರೆಡ್ಡಿ ಪ್ರಕರಣ ಬೇರೆ ಡಿಕೆಶಿ ಪ್ರಕರಣ ಬೇರೆ: ಎಂಬಿಪಿ

ವಿಜಯಪುರ: ದ್ವೇಷದ ರಾಜಕೀಯ ನಡೆಯುತ್ತಿದೆ, ಚಿದಂಬರಂ ಆಯಿತು, ಇದೀಗ ಡಿಕೆಶಿ, ಐಟಿ ರೇಡ್ ಕೇವಲ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡಲು ಬಳಸಲಾಗುತ್ತಿದೆ ಎಂದು ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಆಪರೇಷನ್ ಕಮಲದ ಬಗ್ಗೆ ತನಿಖೆ ಯಾಕೆ ಮಾಡ್ತಾಇಲ್ಲ, ಆಪರೇಷನ್ ಕಮಲದಲ್ಲಿ ನೂರಾರು ಕೋಟಿ ರೂಪಾಯಿ ಚಲಾವಣೆ ಆಗಿದೆ, ಬಿಜೆಪಿ ನಾಯಕರು ಐಟಿ, ಇಡಿ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಸಂಕಷ್ಟಗಳಿಂದ ಹೊರಬರುತ್ತಾರೆ ನಮ್ಮ ಪಕ್ಷ ಪೂರ್ಣ ಬೆಂಬಲ ನೀಡುತ್ತಿದೆ, ಡಿಕೆಶಿ ಬೆಂಬಲಿಗರಿಂದ ದಾಂದಲೆ ಸಹಜ, ಅಭಿಮಾನಿಗಳಿಗೆ ನೋವಾಗಿದೆ, ನನ್ನ ಕಳಕಳಿ ಇಷ್ಟೇ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಬೇಡಿ, ಬಿಜೆಪಿ ದ್ವೇಷದ ರಾಜಕಾರಣದ ವಿರುದ್ಧ ಉಗ್ರ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಜರ್ನಾರ್ದನ್ ರೆಡ್ಡಿ ಬಂಧನ ಮಾಡಿದ್ದಾಗಲೂ ಇಡಿ ಬಳಕೆ ಆರೋಪ ವಿಚಾರ ಬಂದಿತ್ತಲ್ಲ ಎಂದು ಕೇಳಿದರೆ, ಜನಾರ್ದನ ರೆಡ್ಡಿ ಪ್ರಕರಣಕ್ಕೂ ಈ ಪ್ರಕರಣಕ್ಕೂ ವ್ಯತ್ಯಾಸವಿದೆ, ಅವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರಾಗಿದ್ದರು ಎಂದು ಸಮಜಾಯಿಷಿ ನೀಡಿದರು.
You may like
ಆಸ್ಪತ್ರೆಯಿಂದ ಡಿಕೆಶಿ ಡಿಸ್ಚಾರ್ಜ್ : ನಿಮ್ಮೆಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದ ಡಿಕೆ
ಡಿಕೆಶಿಗೆ ಮತ್ತೆ ಸಂಕಷ್ಟ : ಆದ್ರೂ ಉನ್ನತ ಹುದ್ದೆ ಸಿಗುತ್ತೆ : ಡಿಕೆಶಿಗೆ ವಿನಯ್ ಗುರೂಜಿ ಅಭಯ.!
ಡಿಕೆ ಶಿವಕುಮಾರ್ಗೆ ಇವತ್ತೇ ಜಡ್ಜ್ಮೆಂಟ್ ಡೇ : ಜಾಮೀನು ಸಿಗುತ್ತಾ..? ಇಲ್ಲ ತಿಹಾರ್ ಜೈಲೇ ಗತಿನಾ..?
ಡಿಕೆಶಿ ಆಯ್ತು, ಈಗ ಡಿಕೆ ಸುರೇಶ್ ಸರದಿ : ಡಿಕೆಸು ಕೂಡ ಅರೆಸ್ಟ್ ಆಗ್ತಾರಾ..?
ಇನ್ನೂ ನಾಲ್ಕು ದಿನ ತಿಹಾರ್ ಜೈಲಲ್ಲೇ ಡಿಕೆಶಿ : ಬುಧವಾರ ಜಾಮೀನು ತೀರ್ಪು
ಡಿಕೆ ಶಿವಕುಮಾರ್ಗೆ ಇವತ್ತಾದ್ರೂ ಸಿಗುತ್ತಾ ರಿಲೀಫ್..? ತಿಹಾರ್ ಜೈಲೇ ಗತಿಯಾಗುತ್ತಾ..?