Featured
ಡಿಕೆಶಿ ಮೇಲಿನ ಅಭಿಮಾನದ ಪರಾಕಾಷ್ಠೆ, ಬೀದಿಯಲ್ಲಿ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ

ರಾಜ್ಯ: ಜಾರಿ ನಿರ್ದೇಶನಾಲಯದಿಂದ ಡಿಕೆ ಶಿವಕುಮಾರ್ ಬಂಧನ ಹಿನ್ನೆಲೆ ರಾಜ್ಯದೆಲ್ಲೆಡೆ ಪ್ರತಿಭಟನೆಯ ಕಾವು ಜೋರಾಗಿದೆ, ಬಹಳ ಮುಖ್ಯವಾಗಿ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಭದ್ರತೆ ಕುರಿತು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕನಿಷ್ಠ ಹದಿನೈದು ಕಾರ್ಯಕ್ರಮಗಳಿಗೆ ಭಾಹವಹಿಸಬೇಕಿದ್ದು ಎಲ್ಲಿ ಬೇಕಾದರೂ ಪ್ರತಿಭಟನೆಯ ಕಾವು ತಟ್ಟಬಹುದು. ಕಪ್ಪು ಬಾವುಟ ಪ್ರದರ್ಶನ ಮುಜುಗರದಿಂದ ತಪ್ಪಿಸಲು ಇನ್ನಷ್ಟು ಭದ್ರತೆ ಮಾಡಿಕೊಳ್ಳಲಾಗಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಸೇರಿ ಎಲ್ಲಾ ಕಡೆ ಪೊಲೀಸ್ ಸರ್ಪಗಾವಲು ಹಾಕಿದ್ದಾರೆ. ಶಾಂತಿನಗರದ ಜಾರಿ ನಿರ್ದೇಶನಲಾಯದ ಕಚೇರಿ ಎದುರೂ ಕೂಡ ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ. ರಾಮನಗರ, ಮಂಡ್ಯ, ಮೈಸೂರು ಕೋಲಾರ ಜಿಲ್ಲೆಗಳಲ್ಲಿ, ಬಹಳಮುಖ್ಯವಾಗಿ ಕನಕಪುರಕ್ಕೆ ಸಂಪರ್ಕಿಸುವ ಹೆದ್ದಾರಿಗಳು ಬಂದ್ ಆಗಿದ್ದು ಕೆಎಸ್ ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ/ ಅಬ್ಬರದ ಪ್ರತಿಭಟನೆಗಳ ನಡುವೆ ಕನಕಪುರದ ತೌಟಹಳ್ಳಿಯಲ್ಲಿ ಸಾರ್ವಜನಿಕ ಗಣಪನನ್ನ ರಸ್ತೆ ಮೇಲೆ ಇಟ್ಟು ಪ್ರತಿಭಟಿಸಲಾಗುತ್ತಿದೆ.
You may like
ಆಸ್ಪತ್ರೆಯಿಂದ ಡಿಕೆಶಿ ಡಿಸ್ಚಾರ್ಜ್ : ನಿಮ್ಮೆಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದ ಡಿಕೆ
ಡಿಕೆಶಿಗೆ ಮತ್ತೆ ಸಂಕಷ್ಟ : ಆದ್ರೂ ಉನ್ನತ ಹುದ್ದೆ ಸಿಗುತ್ತೆ : ಡಿಕೆಶಿಗೆ ವಿನಯ್ ಗುರೂಜಿ ಅಭಯ.!
ಡಿಕೆ ಶಿವಕುಮಾರ್ಗೆ ಇವತ್ತೇ ಜಡ್ಜ್ಮೆಂಟ್ ಡೇ : ಜಾಮೀನು ಸಿಗುತ್ತಾ..? ಇಲ್ಲ ತಿಹಾರ್ ಜೈಲೇ ಗತಿನಾ..?
ಡಿಕೆಶಿ ಆಯ್ತು, ಈಗ ಡಿಕೆ ಸುರೇಶ್ ಸರದಿ : ಡಿಕೆಸು ಕೂಡ ಅರೆಸ್ಟ್ ಆಗ್ತಾರಾ..?
ಇನ್ನೂ ನಾಲ್ಕು ದಿನ ತಿಹಾರ್ ಜೈಲಲ್ಲೇ ಡಿಕೆಶಿ : ಬುಧವಾರ ಜಾಮೀನು ತೀರ್ಪು
ಡಿಕೆ ಶಿವಕುಮಾರ್ಗೆ ಇವತ್ತಾದ್ರೂ ಸಿಗುತ್ತಾ ರಿಲೀಫ್..? ತಿಹಾರ್ ಜೈಲೇ ಗತಿಯಾಗುತ್ತಾ..?