ರಾಜಕೀಯ
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 21 ಕುರಿಗಳ ಬಲಿ

ಕೊಪ್ಪಳ : ಕಳೆದ ಎರಡು ದಿನಗಳ ಹಿಂದೆ ಆನೆಗೊಂದಿ ಉತ್ಸವ ಆಚರಿಸಿದ ಜಿಲ್ಲಾಡಳಿತ, ಉತ್ಸವಕ್ಕೆ ಆಗಮಿಸಿದ ಜನರಿಗೆ ಊಟಕ್ಕೆ ಮಾಡಿದ್ದ ಅನ್ನವನ್ನು ಬಯಲಿನಲ್ಲಿ ಬಿಸಾಕಿದ್ದು ಆ ಅನ್ನವನ್ನು ತಿಂದು 20ಕ್ಕೂ ಹೆಚ್ಚು ಕುರಿಗಳು ಸಾವಪ್ಪಿರುವ ಘಟನೆ ಇಂದು ನಡೆದಿದೆ.
ಮಾರ್ಚ್ 11 ಮತ್ತು 12 ರಂದು ಎರಡು ದಿನ ಶಾಸಕ ಜನಾರ್ಧನರೆಡ್ಡಿ ನೇತೃತ್ವದಲ್ಲಿ ಜಿಲ್ಲಾಡಳಿತ ಆನೆಗೊಂದಿ ಉತ್ಸವ ಆಚಿರಿಸಿತ್ತು. ಉತ್ಸವಕ್ಕೆ ಬರುವ ಜನರಿಗೆ ಮುಖ್ಯರಸ್ತೆಯ ಗದ್ದೆಯ ಖಾಲಿ ಜಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಗಟ್ಟಲೆ ಜನ ಸೇರುತ್ತಾರೆ ಎಂಬ ನಿರೀಕ್ಷೆಯಿಂದ ಜಿಲ್ಲಾಡಳಿತ ಅಡುಗೆ ಮಾಡಿಸಿದ್ದು, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದ ಪರಿಣಾಮ ಮಾಡಿದ ಸಾಕಷ್ಟು ಅಡುಗೆ ಉಳಿದಿದೆ. ಆದರೆ ಉಳಿದ ಅನ್ನ, ಸಾಂಬಾರ್ ಮತ್ತು ಉಪ್ಪಿಟ್ಟು ಮತ್ತಿತರ ಪದಾರ್ಥವನ್ನು ವ್ಯವಸ್ಥಾಪಕರು ನಿರ್ಜನ ಸ್ಥಳ ಅಥವಾ ನೆಲದಲ್ಲಿ ಮುಚ್ಚಿ ಹಾಕದೆ ಬಯಲಿನಲ್ಲೇ ಬಿಸಾಕಿ ಹೋಗಿದ್ದಾರೆ.
ಅದನ್ನೆ ನೂರಾರು ಕುರಿಗಳು ಈ ಹೊಲದಲ್ಲಿ ಬಂದಿದ್ದು, ಬಿಸಾಕಿದ್ದ ಅನ್ನ ಮತ್ತಿತರ ಪದಾರ್ಥ ತಿಂದಿವೆ. ರಾತ್ರಿ ಉತ್ಸವದ ಪ್ರಮುಖ ವೇದಿಕೆಯ ಹತ್ತಿರ ಇದ್ದ, ಹಟ್ಟಿಯಲ್ಲಿ ಏಕಾ ಏಕಿ ನೂರಾರು ಕುರಿಗಳು ಅಸ್ತವ್ಯವಸ್ಥವಾಗಿವೆ. ವಿಷಯ ತಿಳಿದು ಪಶು ವೈದ್ಯಾಧಿಕಾರಿ ಡಾ|| ಸೋಮಪ್ಪ ಮತ್ತವರ ತಂಡ ಆಗಮಿಸಿ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅದರಲ್ಲಿ 21 ಕುರಿಗಳು ಸಾವನಪ್ಪಿರುವುದು ದೃಢಪಡಿಸಿದ್ದಾರೆ.
ಈ ಕೆಟ್ಟ ಪದಾರ್ಥವನ್ನು ತಿಂದಿರುವ ಕುರಿಗಳಿಗೆ ಆರೋಗ್ಯ ಸಮಸ್ಯೆಯಾಗಿದೆ. ಅದರಲ್ಲಿ 21 ಕುರಿಗಳು ಸಾವನಪ್ಪಿವೆ. ಕುರಿಗಾರರು ಇದನ್ನು ಗಮನಿಸಿಲ್ಲ ಎಂದಿದ್ದಾರೆ. ಆದರೆ ಆಹಾರ ಪದಾರ್ಥವನ್ನು ಬಯಲಿನಲ್ಲಿ ಬಿಸಾಡದೇ ಮುಂಜಾಗೃತವಾಗಿ ಉಳಿದ ಪದಾರ್ಥವನ್ನು ನೆಲದಲ್ಲಿ ಮುಚ್ಚಿ ಹಾಕಿಬೇಕಿತ್ತು
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?