ವೈರಲ್
ಆಸ್ಪತ್ರೆಗೆ ದಾಖಲಾದ ಮಂಗ: ಮಾನವೀಯತೆ ಮೆರೆದ ಮಾನವ

ಬೆಳಗಾವಿ : ಗಂಭೀರವಾಗಿ ಗಾಯಗೊಂಡರು ಕಳೆದ ಎರಡು ದಿನಗಳಿಂದ ನರಳಾಡುತ್ತಿದ್ದ ಮಂಗನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ ಕೇರೂರ ಗ್ರಾಮದ ರೈತ ಮುಖಂಡ ಪರಗೌಡ ಪಾಟೀಲ್ ಮಂಗನನ್ನ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೇರೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕಾಲಿಗೆ ಗಾಯ ಮಾಡಿಕೊಂಡು ಮಂಗವೊಂದು ಗ್ರಾಮದ ತೋಟದ ವಸತಿ ಪ್ರದೇಶದಲ್ಲಿ ಓಡಾಡುತ್ತಿದ್ದು ಬಳಿಕ ಅಲ್ಲೆ ಇದ್ದ ಬಾವಿಯೊಂದಕ್ಕೆ ನೀರು ಕುಡಿಯಲು ಇಳಿದಿದ್ದ ಮಂಗ ಗಾಯಗೊಂಡಿದ್ದ ಹಿನ್ನಲೆ ಮೆಲೆ ಬರಲು ಆಗದೆ ರೋದನೆ ಪಡುತ್ತಿತ್ತು ಇದನ್ನು ಗಮನಿಸಿದ ರೈತ ಮುಖಂಡ ಪರಗೌಡ ಕೂಡಲೆ ಮಂಗನನ್ನ ಹಿಡಿದು ಚಿಕ್ಕೋಡಿ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಅಲ್ಲದೆ ಚಿಕಿತ್ಸೆ ಪಡೆಯುತ್ತಿರುವ ಮಂಗನ ಆರೈಕೆಯನ್ನು ತಮ್ಮ ತೋಟದಲ್ಲಿ ಮಾಡುತ್ತಿದ್ದಾರೆ. ಮಂಗನ ಕಷ್ಟ ಕಂಡು ಮಂಗನ ಸಮಸ್ಯೆಗೆ ಸ್ಪಂದಿಸಿದ ಪರಗೌಡ ಪಾಟೀಲ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?