ಧಾರವಾಡ : ಧಾರವಾಡದ ವಿ.ವಿ ದಿಂದ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ರೈತರು ಪ್ರತಿ ಎಕರೆಗೆ 1ಲಕ್ಷ ರೂ ಖರ್ಚು ಮಾಡಿ ಬೀಜ ಹಾಕುತ್ತಾರೆ. ಆದರೆ, ಅವರಿಗೆ ಫಸಲು ಬಂದಿದ್ದು ಕೇವಲ 20ಸಾವಿರ ರೂ ಮಾತ್ರ. ಇದಕ್ಕೆ ಕಾರಣ ಧಾರವಾಡದ ವಿಶ್ವವಿದ್ಯಾಲಯ. ನಾವು ಕಡ್ಡಿ ಮೇಣಸಿನಬೀಜ ಖರಿದಿ ಮಾಡಿದ್ದೇವು. ಆದರೆ, ಬಂದಿದ್ದು ಮಾತ್ರ ಗುಂಟುರು ಬೀಜ. ಮಾರುಕಟ್ಟೆಯಲ್ಲಿ ದಪ್ಪ ಮೇಣಸಾನಕಾಯಿ ಹಾಗೂ ಕಡ್ಡಿ ಮೇಣಸಿನಕಾಯಿ ಪ್ರತಿ ಕ್ವಿಂಟಾಲ್ ಗೆ 70-80ಸಾವಿರ ರೂ ಗೆ ಮಾರಾಟವಾಗುತ್ತಿವೆ. ಆದರೆ, ಗುಂಟುರು ಮೇಣಸಿನಕಾಯಿ ಕೇವಲ 8ಸಾವಿರ ರೂಗೆ ಮಾರಾಟ ಆಗುತ್ತಿದೆ. ಧಾರವಾಡ ವಿ. ವಿ ದಿಂದ ರೈತರಿಗೆ ಅನ್ಯಾಯವಾಗಿದ್ದು, ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಕೃಷಿಕ ಸಮಾಜದ ರಾಜ್ಯ ಉಪಾಧ್ಯಕ್ಷ ಬಸವರಾಜ ಸಜ್ಜನರ ಎಚ್ಚರಿಕೆ ನೀಡಿದರು.
ಧಾರವಾಡ ವಿ. ವಿ ದಿಂದ ರೋಣ ತಾಲೂಕಿನ ಕೌಜಗೇರಿ ಗ್ರಾಮದ ರೈತ ಸುರೇಶಗೌಡ್ರ ಪೋಲಿಸಪಾಟೀಲರಿಗೆ ಅನ್ಯಾಯ ಮಾಡಲಾಗಿದೆ. ಪ್ರತಿ ಎಕರೆಗೆ 3ಸಾವಿರದಂತೆ ಒಟ್ಟು 8ಎಕರೆಗೆ 24ಸಾವಿರ ರೂ ಹಣ ನೀಡಿ ಬೀಜ ಖರಿದಿಸಿದ್ದರು. ನಂತರ ಬಿತ್ತನೆ ಮಾಡಿದಾಗ ಎಕರೆಗೆ 1ಲಕ್ಷ ರೂ ಖರ್ಚು ಮಾಡಿದ್ದಾರೆ. ಇದರಿಂದ ರೈತರಿಗೆ ಸಂಪೂರ್ಣ ಹಾನಿಯಾಗಿದೆ. ಲಕ್ಷಾಂತರ ರೂ ಹಣವನ್ನು ನೀಡಿ ವಿಜ್ಞಾನಿಗಳನ್ನು ಯುನಿವರ್ಸಿಟಿಯಲ್ಲಿ ಇಟ್ಟಿರುತ್ತಾರೆ. ಆದರೆ, ಅವರಿಂದಲೇ ರೈತರಿಗೆ ಮೊಸವಾದರೆ ರೈತರ ಕಥೆ ಏನು.? ಹಾನಿಗೊಳಗಾದ ರೈತನಿಗೆ 8ದಿನಗಳ ಒಳಗೆ ಸೂಕ್ತ ಪರಿಹಾರ ನೀಡದಿದ್ದರೇ ಧಾರವಾಡದ ವಿಶ್ವ ವಿದ್ಯಾಲಯದ ಮುಂದೆ ಅಹೊರಾತ್ರಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಕಂಪನಿಗಳು ರೈತರಿಗೆ ವಂಚಿಸುತ್ತವೆ ಎಂದು ಧಾರವಾಡದ ವಿಶ್ವ ವಿದ್ಯಾಲಯದಲ್ಲಿ ಬೀಜ ಖರಿದಿಸುತ್ತಾರೆ. ಆದರೆ, ಸರ್ಕಾರದ ವಿ. ವಿದ್ಯಾಲಯದಲ್ಲೇ ಕಳಪೆ ಗುಣಮಟ್ಟದ ಬೀಜ ವಿತರಣೆ ಮಾಡಿದ್ದು ರೈತರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ನಾವು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ಕಳೆದ ಒಂದೂವರೆ ತಿಂಗಳ ಹಿಂದೆ ಖುದ್ದು ರೈತರ ಜಮೀನಿಗೆ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿ ಹೊಗಿದ್ದಾರೆ. ಆದರೂ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಈ ಕೂಡಲೇ ಕೃಷಿ ಸಚಿವರು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?