International News
ಸಮ ಮತ ಪಡೆದರೂ ಸಿಂಘ್ವಿ ಸೋತಿದ್ದೇಗೆ..? ರಾಜ್ಯಸಭೆಗೆ ವಿಚಿತ್ರ ರೂಲ್ಸ್..!

ಮಂಗಳವಾರ ಕರ್ನಾಟಕದ ಜೊತೆಗೆ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿಯೂ ರಾಜ್ಯಸಭೆ ಚುನಾವಣೆ ನಡೆಯಿತು. ಹಿಮಾಚಲ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಬಳಿ 40 ಶಾಸಕರ ಬಲ ಇತ್ತು. ಹೀಗಾಗಿ ಅಭಿಷೇಕ್ ಮನು ಸಿಂಘ್ವಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಿಗಿತ್ತು. ಜೊತೆಗೆ ಬಿಜೆಪಿ ಬಳಿ ಇದ್ದಿದ್ದೇ 25 ಶಾಸಕರು. ಮೂವರು ಪಕ್ಷೇತರ ಶಾಸಕರ ಬೆಂಬಲ ಪಡೆದರೂ ಬಿಜೆಪಿ ಗೆಲ್ಲುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಫಲಿತಾಂಶ ಬಂದಾಗ ಎಲ್ಲವೂ ತಲೆ ಕೆಳಗಾಗಿದೆ.
ಏಕೆಂದರೆ, ಮತ ಎಣಿಕೆ ಪ್ರಕ್ರಿಯೆ ನಡೆದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ, ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಇಬ್ಬರೂ ತಲಾ 34 ಮತಗಳನ್ನು ಪಡೆದಿದ್ದರು. ಹೀಗಾಗಿ ಡ್ರಾ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಹೀಗೆ ಡ್ರಾ ನಡೆದು ಚೀಟಿ ಎತ್ತಿದಾಗ ಚೀಟಿಯಲ್ಲಿ ಸಿಂಘ್ವಿ ಹೆಸರಿತ್ತು. ಆದರೂ ಸಿಂಘ್ವಿ ಗೆದ್ದಿಲ್ಲ. ಇದಕ್ಕೆ ರಾಜ್ಯಸಭೆ ಚುನಾವಣೆಗೆ ಅನುಸರಿಸುವ ವಿಚಿತ್ರ ಪದ್ಧತಿ ಕಾರಣವಾಗಿದೆ.
ಏನಿದು ವಿಚಿತ್ರ ರೂಲ್ಸ್..?
ಸಾಮಾನ್ಯವಾಗಿ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಸಮವಾದ ಮತಗಳನ್ನು ಪಡೆದಿದ್ದರೆ ಡ್ರಾ ಮೂಲಕ ಚೀಟಿ ಎತ್ತಲಾಗುತ್ತದೆ. ಚೀಟಿಯಲ್ಲಿ ಯಾರ ಹೆಸರು ಬರುತ್ತದೆಯೋ ಅವರು ಗೆಲ್ಲುತ್ತಾರೆ. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಈ ನಿಯಮ ಅದಲು ಬದಲಾಗುತ್ತದೆ. ಚುನಾವಣಾ ಕಾಯ್ದೆ-1961ರ ನಿಯಮ 75ರಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಮವಾದ ಮತಗಳನ್ನು ಪಡೆದಾಗ ಅನುಸರಿಸಬೇಕಾದ ಪದ್ಧತಿಯನ್ನು ತಿಳಿಸಲಾಗಿದೆ. ಈ ನಿಯಮ 75ರ ಪ್ರಕಾರ ಡ್ರಾ ನಡೆದಾಗ ಎತ್ತಿದ ಚೀಟಿಯಲ್ಲಿ ಬಂದವರು ಸೋಲುತ್ತಾರೆ. ಡಬ್ಬಿಯಲ್ಲಿಯೇ ಉಳಿಯುವ ಹೆಸರಿನವರನ್ನು ವಿಜೇತರು ಎಂದು ಘೋಷಿಸಬೇಕು ಎಂದು ತಿಳಿಸಿದೆ. ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆ ವೇಳೆ ಈ ನಿಯಮದಡಿ ಡ್ರಾ ನಡೆಸಿದಾಗ ಎತ್ತಿದ ಚೀಟಿಯಲ್ಲಿ ಸಿಂಘ್ವಿ ಹೆಸರಿತ್ತು. ಹೀಗಾಗಿ ಅಭಿಷೇಕ್ ಮನು ಸಿಂಘ್ವಿ ಸೋತು ಹೋಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?