ಮುಂಬೈ : ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ಸೋಮವಾರ ತಮ್ಮ ಬದುಕಿನ ಹಾಡು ಮುಗಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಪಡಿತರಾಗಿ್ದ್ ಪಂಕಜ್ ತಮ್ಮ 72ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಉದಾಸ್ ಕುಟುಂಬದವರು ಟ್ವೇಟ್ ಮೂಲಕ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಿವುಡ್ನಲ್ಲಿ ಗಾಯನದ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಗಜಲ್ ಗಾಯಕ ಪಂಕಜ್ ಉದಾಸ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಗಾಯಕ ಸೋನು ನಿಗಮ್ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ನನ್ನ ಬಾಲ್ಯದ ಪ್ರಮುಖ ಭಾಗ ಇಂದು ಕಳೆದುಹೋಗಿದೆ. ಪಂಕಜ್ ಉದಾಸ್ ಜೀ, ನಾನು ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ. ನೀವು ಇನ್ನಿಲ್ಲ ಎಂದು ಸೋನು ನಿಗಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಂಬನಿ ಮಿಡಿದಿದ್ದಾರೆ.
ಪಂಕಜ್ ಉದಾಸ್ ಅವರು ಮೇ17, 1951 ರಂದು ಗುಜರಾತ್ನ ಜೆಟ್ಪುರದಲ್ಲಿ ಜನಿಸಿದರು. ಅವರು 1980 ರಲ್ಲಿ ಆಹತ್ ಎಂಬ ಹೆಸರಿನ ಗಜಲ್ ಆಲ್ಬಂ ಬಿಡುಗಡೆ ಮಾಡುವ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಬಾಲಿವುಡ್ನಲ್ಲಿ ಸಂಜಯ್ ದತ್ ಅವರ ನಾಮ್ ಚಿತ್ರಕ್ಕಾಗಿ ಚಿತ್ತಿ ಆಯೀ ಹೈ ಎಂಬ ಟ್ರ್ಯಾಕ್ ಅನ್ನು ಹಾಡಿದ್ದರು.
ಈ ಹಾಡನ್ನು ಜನ ಇಂದಿಗೂ ಗುನುಗುತ್ತಿರುವುದೇ ಅವರ ಗಾಯನಕ್ಕೆ ಸಾಕ್ಷಿ.
ಕನ್ನಡದಲ್ಲೂ ಎರಡು ಹಅಡುಗಳನ್ನು ಪಂಕಜ್ ಉದಾಸ್ ಹಅಡಿದ್ದಾರೆ. ಕನ್ನಡ ಬರದಿದ್ದರೂ ಕನ್ನಡ ಕಲಿತು ಈ ಹಾಡು ಹಾಡಿದ್ದರು ಎಂದು ಸುನೀಲ್ ಕುಮಾರ್ ದೇಸಾಯಿ ಪಂಕಜ್ ಅವರನ್ನು ನೆನಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮೊದಲ ಸಿನಿಮಾ ಸ್ಪರ್ಶ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತ್ತು. ಈ ಸಿನಿಮಾದಲ್ಲಿ ಎಲ್ಲ ಹಾಡುಗಳೂ ಕುಡ ಹಿಟ್ ಆಗಿತ್ತು. ಅದರಲ್ಲೂ ಚೆಂದಕಿಂತ ಚೆಂದ ಹಾಡಂತೂ ಈಗಲೂ ಬಹು ಜನಪ್ರಿಯ. ಈ ಹಾಡಿಗೆ ದನಿಯಾಗಿದ್ದ ಪಂಕಜ್ ಉದಾಸ್ ಇನ್ನು ನೆನಪು ಮಾತ್ರ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?