ಪ್ರಥಮ ಪೂಜಿತನಾದ ಗಣೇಶನು ಜೀವನದ ಕಷ್ಟಗಳನ್ನು ನಿವಾರಿಸುತ್ತಾನೆ, ಭಕ್ತಿಯಿಂದ ಪೂಜಿಸಿದರೆ ಬೇಡಿದ ವರವನ್ನು ಇಲ್ಲವೆನ್ನದೆ ನೀಡುವವನು ಎಂಬ ನಂಬಿಕೆ ಇದೆ. ಶಾಂತಿ ಹಾಗೂ ಸೌಹಾರ್ದತೆಯನ್ನು ಬಿಂಬಿಸುವವನೂ ಗಣೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಷ್ಟು ಮಾತ್ರವಲ್ಲದೇ ವಿನಾಯಕನ ದೇಹದ ಪ್ರತಿಯೊಂದು ಅವಯವಗಳಿಗೂ ಕೂಡಾ ತನ್ನದೇ ಆದ ಆಧ್ಯಾತ್ಮಿಕ ಮಹತ್ವವಿದೆ.
ಗಣೇಶನ ದೊಡ್ಡ ತಲೆಯ ಸಂಕೇತ ‘ ದೊಡ್ಡದಾಗಿ ಯೋಚಿಸಿ’ ಎಂದರ್ಥ. ಹೇಗೆಂದರೆ ಗಣೇಶನನ್ನು ಬುದ್ಧಿವಂತಿಕೆಯ ದೇವರಾಗಿ ಪೂಜಿಸಲಾಗುತ್ತದೆ. ವಿನಾಯಕನ ಆನೆಯ ತಲೆಯು ಬುದ್ಧಿವಂತಿಕೆ ಹಾಗೂ ವಿಶೇಷ ಮೆದುಳಿನ ಶಕ್ತಿಯನ್ನು ಸೂಚಿಸುತ್ತದೆ.
ಗಣೇಶನ ದೊಡ್ಡ ಕಿವಿಯ ಅರ್ಥ ”ಹೆಚ್ಚು ಆಲಿಸಿ’ ಎನ್ನುವುದಾಗಿದೆ. ವಿಶಾಲವಾದ ಕಿವಿಗಳು ಅವನ ಸಹಾಯವನ್ನು ಪಡೆಯುವ ಜನರ ಕಷ್ಟವನ್ನು ಆಲಿಸುವಂತಹ ಸಾಮರ್ಥ್ಯವು ಗಜಮುಖನಿಗೆ ಹೆಚ್ಚಾಗಿರುತ್ತದೆ. ಜ್ಞಾನವನ್ನು ಪಡೆಯಲು ಕಿವಿಗಳನ್ನು ಬಳಸಲಾಗುತ್ತದೆ. ಆಲೋಚನೆಗಳನ್ನು ಹೆಚ್ಚಿಸುವ ಮಾತುಗಳನ್ನು ಆಲಿಸುವ ಪ್ರಾಮುಖ್ಯತೆಯನ್ನು ಗಣೇಶನ ಕಿವಿಯು ಸೂಚಿಸುತ್ತದೆ.
ಗಣಪತಿಯ ಪುಟ್ಟ ಕಣ್ಣುಗಳು ಏಕಾಗ್ರತೆಯ ಸಂಕೇತವಾಗಿದೆ. ಈ ಕಣ್ಣುಗಳು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಕಲಿಸುತ್ತವೆ. ಹೇಗೆಂದರೆ ಒಬ್ಬ ವ್ಯಕ್ತಿಯು ಏಕಾಗ್ರತೆಯ ಮೂಲಕ ತನ್ನ ಮನಸ್ಸನ್ನು ನಿಯಂತ್ರಿಸಿದರೆ ಜೀವನದಲ್ಲಿ ಯಾವುದೇ ಯಶಸ್ಸನ್ನು ಸಾಧಿಸಬಹುದು.
ಗಣೇಶನ ಹಣೆಯ ಮೇಲಿರುವ ಊರ್ಧ್ವ ತಿಲಕವು ಗಣೇಶನು’ ಸಮಯದ ಪರಿಪಾಲಕ’ನೆಂದು ಸೂಚಿಸುತ್ತದೆ. ಹಣೆಯ ಮೇಲಿರುವ ತ್ರಿಶೂಲವು ಸಮಯವನ್ನು ಸಂಕೇತಿಸುತ್ತದೆ. ಜೊತೆಗೆ ಭೂತಕಾಲ, ವರ್ತಮಾನಕಾಲ ಹಾಗೂ ಭವಿಷ್ಯತ್ಕಾಲ ಹಾಗೂ ಅದರ ಮೇಲಿರುವ ಗಣೇಶನ ಪಾಂಡಿತ್ಯವನ್ನು ಸೂಚಿಸುತ್ತದೆ. ಆದ್ದರಿಂದ ಈ ಗುರುತನ್ನು ಸಕ್ರಿಯ ಶಕ್ತಿಯನ್ನಾಗಿ ಪರಿಗಣಿಸಲಾಗುತ್ತದೆ.
ಗಣೇಶನ ಪುಟ್ಟ ಬಾಯಿಯು ‘ ಕಡಿಮೆ ಮಾತನಾಡಿ’ ಎನ್ನುವುದರ ಸಂಕೇತ. ಇದು ನಮಗೆ ಹೆಚ್ಚು ಮಾತನಾಡುವ ಬದಲು ಕೆಲಸವನ್ನು ಮಾಡು ಎನ್ನುವುದನ್ನು ಕಲಿಸುತ್ತದೆ. ಹಾಗಾಗಿ ನಮ್ಮ ಮಾತಿಗಿರುವ ಮೌಲ್ಯವನ್ನು ಮೊದಲು ಅರಿತುಕೊಂಡು, ಆಲಿಸಿ ನಂತರ ಯೋಚಿಸಿ, ನಂತರ ಕಾರ್ಯವನ್ನು ಮಾಡಿದ ಮೇಲೆ ಮಾತನಾಡಬೇಕು ಎನ್ನುವುದನ್ನು ತಿಳಿಸುತ್ತದೆ.
ಗಣೇಶನ ಏಕ ದಂತವು ಎಲ್ಲಾ ರೀತಿಯ ದ್ವಂದ್ವಗಳನ್ನು ಜಯಿಸುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ. ಮುರಿದ ದಂತವು ಜೀವನದಲ್ಲಿ ಅನುಭವಗಳನ್ನು ವಿಶ್ಲೇಷಿಸಲು, ಒಳ್ಳೆಯದನ್ನು ಉಳಿಸಿಕೊಳ್ಳಲು, ಕೆಟ್ಟದ್ದನ್ನು ಹೊರಹಾಕಲು ಕಲಿಸುತ್ತದೆ. ಉಳಿದಿರುವ ಏಕದಂತವು ಆತ್ಮಾವಲೋಕನ ಮಾಡಲು ಉತ್ತಮ ಆಲೋಚನೆಗಳು ಮತ್ತು ಒಳ್ಳೆಯ ಅಭ್ಯಾಸಗಳನ್ನು ಉಳಿಸಿಕೊಳ್ಳಲು ಹಾಗೂ ಕೆಟ್ಟ ಆಲೋಚನೆಗಳು ಮತ್ತು ಕೆಟ್ಟ ಅಭ್ಯಾಸಗಳನ್ನು ಹೊರಹಾಕುವಂತಹ ಜೀವನ ಪಾಠವನ್ನು ನಮಗೆ ಕಲಿಸುತ್ತದೆ.
ಜೀವನದಲ್ಲಿ ಒಳ್ಳೆಯದು ಹಾಗೂ ಕೆಟ್ಟದನ್ನು ಜೀರ್ಣಿಸಿಕೊಳ್ಳಿ ಎನ್ನುವ ಪಾಠವನ್ನು ಗಣೇಶನ ಹೊಟ್ಟೆಯು ಹೇಳುತ್ತದೆ. ಶಾಂತತೆಯ ಸದ್ಗುಣವನ್ನು ಸಾಧಿಸಿ ಎನ್ನುವುದನ್ನೂ ಸೂಚಿಸುತ್ತದೆ. ಗಣೇಶನ ಹೊಟ್ಟೆಯು ಅನಂತ ವಿಶ್ವಗಳನ್ನು ಒಳಗೊಂಡಿದೆ. ಇದು ಗಣೇಶನಿಗಿರುವ ಬ್ರಹ್ಮಾಂಡದ ದುಃಖಗಳನ್ನು ನುಂಗುವ ಹಾಗೂ ಜಗತ್ತನ್ನು ರಕ್ಷಿಸುವ ಸಾಮರ್ಥ್ಯವನ್ನು ಸಾಂಕೇತಿಸುತ್ತದೆ
ಸಾಮಾಜಿಕತೆ ಹಾಗೂ ಆಧ್ಯಾತ್ಮಿಕತೆ ಎರಡೂ ಜೀವನದ ಪ್ರಮುಖ ಹಂತಗಳಾಗಿದೆ. ಗಣೇಶನ ಒಂದು ಕಾಲು ನೆಲದ ಮೇಲಿದ್ದು ಇನ್ನೊಂದು ಕಾಲು ಎತ್ತಿರುವಂತೆ ಇರುವುದರಿಂದ ಇದು ಜೀವನ ವಿಧಾನವನ್ನು ಸೂಚಿಸುತ್ತದೆ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜಗತ್ತಿನಲ್ಲಿಯೂ ಜೀವನ ನಡೆಸಬೇಕು ಎನ್ನುವುದನ್ನು ತಿಳಿಸುತ್ತದೆ.
ವಿನಾಯಕನ ನಾಲ್ಕು ತೋಳುಗಳೂ ದೇಹದ ಸೂಕ್ಷ್ಮ ಆಂತರಿಕ ಗುಣಲಕ್ಷಣಗಳನ್ನು ಪ್ರನಿಧಿಸುತ್ತದೆ. ಅವುಗಳೆಂದರೆ ಮನಸ್ಸು, ಬುದ್ದಿಶಕ್ತಿ, ಅಹಂ ಹಾಗೂ ಚಿತ್ತ (ಆತ್ಮಸಾಕ್ಷಿ.)
ಮೊದಲ ತೋಳು: ಇದು ಬಂಧಗಳು ಹಾಗೂ ಮಮತೆಯನ್ನು ಬೇರ್ಪಡಿಸುವುದರ ಸೂಚಕವಾಗಿದೆ. ಕೊಡಲಿಯನ್ನು ಬೀಸುವ ಕೈಯು ಎಲ್ಲಾ ಆಸೆಗಳನ್ನು ಬೇರ್ಪಡಿಸುವ, ನೋವು, ಸಂಕಟಗಳನ್ನು ದೂರ ಮಾಡುವುದರ ಸಂಜೇತ. ಈ ಕೊಡಲಿಯಿಂದ ಗಣೇಶನು ಅಡೆತಡೆಗಳನ್ನು ನಿವಾರಿಸುತ್ತಾನೆ ಹಾಗೂ ಹಿಮ್ಮೆಟ್ಟಿಸುತ್ತಾನೆ.
ಎರಡನೇ ತೋಳು: ಎರಡನೇ ಕೈಯಲ್ಲಿಕಮಲದ ಹೂವು ಹಾಗೂ ಹಗ್ಗವನ್ನು ಗಣೇಶನು ಹಿಡಿದಿದ್ದಾನೆ. ಪದ್ಮವು ಮಾನವ ವಿಕಾಸದ ಅತ್ಯುನ್ನತ ಗುರಿಯನ್ನು ಪ್ರತಿನಿಧಿಸಿದರೆ, ಹಗ್ಗವು ಭಕ್ತರನ್ನು ಅತ್ಯುನ್ನತ ಗುರಿಯತ್ತ ಎಳೆಯುವುದು.
ಮೂರನೇ ತೋಳು: ಗಣೇಶನ ಮೂರನೇ ಕೈಯು ಆಶೀರ್ವಾದದ ಭಂಗಿಯಲ್ಲಿದೆ. ಇದು ಆಧ್ಯಾತ್ಮಿಕ ಅನ್ವೇಷಕರಿಗೆ ರಕ್ಷಣೆ ಮತ್ತು ಮಾರ್ಗದರ್ಶನ ನೀಡುತ್ತದೆ.
ನಾಲ್ಕನೇ ತೋಳು: ಮೋದಕವನ್ನು ಹಿಡಿದಿರುವ ನಾಲ್ಕನೇ ಹಸ್ತವು ಅರಿತುಕೊಂಡ ಆಂತರಿಕ ಆತ್ಮದ ಮಾಧುರ್ಯವನ್ನು ಸೂಚಿಸುತ್ತದೆ ಹಾಗೂ ಭಕ್ತಿಯ ಪ್ರತಿಫಲವನ್ನು ಪ್ರತಿನಿಧಿಸುತ್ತದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?