Featured
ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್ : ಹೈಕಮಾಂಡ್ ಲಿಸ್ಟ್ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

ರೈಸಿಂಗ್ ಕನ್ನಡ : ನವದೆಹಲಿ
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರೋ ಸಂಪುಟ ಸರ್ಕಸ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರೋ ಸಿಎಂ ಬಸವರಾಜ ಬೊಮ್ಮಾಯಿ, ಸೋಮವಾರ ತಡರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಭೇಟಿಯಾಗಿ ಮಾತುಕತೆ ನಡೆಸಿದ್ರು. ಸುಮಾರು ಒಂದೂಕಾಲು ಗಂಟೆ ಕಾಲ ನಡ್ಡಾ ಜೊತೆ ಸಂಪುಟ ರಚನೆ ಕುರಿತು ಸಿಎಂ ಬೊಮ್ಮಾಯಿ ಚರ್ಚಿಸಿದ್ರು.
ನಡ್ಡಾ ಜೊತೆಗಿನ ಭೇಟಿ ಹಾಗೂ ಚರ್ಚೆ ಬಳಿಕ ದೆಹಲಿಯಲ್ಲಿ ಮಾತ್ನಾಡಿದ ಸಿಎಂ ಬೊಮ್ಮಾಯಿ, ನೂತನ ಸಚಿವ ಪಟ್ಟಿಯನ್ನ ಸ್ವತಃ ಜೆ.ಪಿ. ನಡ್ಡಾ ಅವರೇ ಬಿಡುಗಡೆ ಮಾಡ್ತಾರೆ. ಎಲ್ಲವೂ ಮಂಗಳವಾರ ಗೊತ್ತಾಗಲಿದೆ ಎಂದು ಹೇಳಿದ್ರು. ನಾವು ಎರಡದಿಂದ ಮೂರು ಪಟ್ಟಿ ನೀಡಿದ್ದೇವೆ. ಯಾರು ಸಚಿವರು, ಯಾರು ಡಿಸಿಎಂ ಆಗ್ತಾರೆ ಅನ್ನೋದು ಮಂಗಳವಾರ ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.
ಪ್ರಾದೇಶಿಕವಾರು ಸೇರಿದಂತೆ ಎಲ್ಲಾ ರೀತಿಯಲ್ಲೂ ನಡ್ಡಾ ಅವರ ಜೊತೆ ಚರ್ಚೆ ನಡೆಸಿದ್ದೇವೆ. ನಾವೂ ಕೂಡ ಪಟ್ಟಿ ನೀಡಿದ್ದೇವೆ. ಎಲ್ಲಾ ವಿಚಾರಗಳನ್ನ ಅಳೆದು ತೂಗಿ, ಜೆಪಿ ನಡ್ಡಾ ಅವರು ಎಲ್ಲವನ್ನ ಪ್ರಕಟಣೆ ಮಾಡ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರ ಅಭಿಪ್ರಾಯ ಪಡೆದುಕೊಂಡೇ ಲಿಸ್ಟ್ ರೆಡಿಯಾಗಿದೆ. ಮಿತ್ರ ಮಂಡಳಿ ಶಾಸಕರು ಈಗ ವಲಸಿಗರಲ್ಲ. ಅವರು ನಮ್ಮ ಪಕ್ಷದ ನೆಲೆಸಿಗರು ಅಂತ ವಲಸಿಗರ ಪರವಾಗಿ ಸಿಎಂ ಬೊಮ್ಮಾಯಿ ಬ್ಯಾಟ್ ಬೀಸಿದ್ರು.
ಅದೇನೇ ಆಗ್ಲಿ ಮಂಗಳವಾರ ಎಲ್ಲ ಕುತೂಹಲಕ್ಕೆ ಫುಲ್ಸ್ಟಾಪ್ ಬೀಳಿದೆ. ಹೊಸ ಕ್ಯಾಬಿನೆಟ್ನಲ್ಲಿ ಯಾರು ಇರ್ತಾರೆ.? ಯಾರು ಹೋಗ್ತಾರೆ ಅನ್ನೋ ಕಾತರ ಎಲ್ಲರಲ್ಲೂ ಇದೆ. ಜೊತೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?