ರೈಸಿಂಗ್ ಕನ್ನಡ :- ಕೆ.ಎಲ್ ರಾಹುಲ್ ನಾಯಕತ್ವ ಹಾಗೂ ಅನಿಲ್ ಕುಂಬ್ಳೆ ಕೋಚ್ ಆಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ 2021ರ ಐಪಿಎಲ್ ನ ಆರಂಭದಲ್ಲಿ ಕಳಪೆ ಪ್ರದರ್ಶನ ನೀಢಿದ್ದರೂ ಕೊನೆಗೆ ಸತತ ಐದು ಗೆಲವು ಕಂಡಿತ್ತು. ಆದ್ಯಾಗೂ ಫ್ಲೇಆಫ್ ಗೆ ಏರಲು ಪಂಜಾಬ್ ಬಳಿ ಸಾಧ್ಯವಾಗಲಿಲ್ಲ.
ಹೀಗಾಗಿ , ತಂಡವನ್ನು ಮತ್ತಷ್ಟು ಬಲಗೊಳಿಸೋಕೆ ಮುಂದಾಗಿರುವ ಪಂಜಾಬ್ , ಕಳಪೆ ಪ್ರದರ್ಶನ ನೀಡಿದ ಐದು ಆಡಗಾರರನ್ನು ಕೈಬಿಡೋಕೆ ಮುಂದಾಗಿದೆ. ಈ ಮೂಲಕ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ ಪಂಜಾಬ್ ತಂಡ. ಹಾಗಾದರೆ , ಆ ಐದು ಆಡಗಾರರು ಯಾರು ಎನ್ನವ ಬಗ್ಗೆ ತುಂಬಾ ಕೂತುಹಲಕಾರಿಯಾಗಿದೆ.
ಗ್ಲೇನ್ ಮ್ಯಾಕ್ಸ್ ವೆಲ್ ಬಗ್ಗೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು. ಇದಕ್ಕಾಗಿಯೇ ಐಪಿಎಲ್ 2021 ಹರಾಜಿನಲ್ಲಿ 10.75 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿತ್ತು. ಆದರೆ, ಇವರು ತುಂಬಾನೇ ಕಳಪೆ ಪ್ರದಶ್ನ ನೀಡಿದ್ದರು. ಇವರ ಎವರೇಜ್ ರನ್ ಕೇವಲ 15.35 ಇದ್ದರೆ, ಸ್ಟ್ಕೆಕ್ ರೇಟ್ 101.88 ಇದೆ. ಸತತ ಕಳಪೆ ಪ್ರದರ್ಶನ ನೀಡಿದ್ದರೂ ಅವರನ್ನು ನಿರಂತರವಾಗಿ ಆಡಿಸಲಾಗಿತ್ತು. ಆದಾಗ್ಯೂ ಅವರನ್ನು ಆಯ್ಕೆ ಮಾಡಿಕೊಡಳ್ಳಲಾಗಿತ್ತು.
ಜೇಮ್ಸ್ ನೀಶಮ್ : ಜೇಮ್ಸ್ ನೀಶಮ್ ಆಲ್ ರೌಂಡರ್ ಎನ್ನು ಕಾರಣಕ್ಕೆ ಕಿಂಗ್ಸ್ ಇಲವೆನೆ ಪಂಜಾಬ್ ತಂಡ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ, ಮೊದಲು ಆಡಿದ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ.
ಕೃಷ್ಣಪ್ಪ ಗೌತಮ್ : ಕನ್ನಡಿಗ ಕೃಷ್ಣಪ್ಪ ಗೌತಮ್ ಕರ್ನಾಡಕ ಪ್ರೀಮಿಯರ್ ಲೀಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೇ ಕಾರಣಕ್ಕೆ ಅವರನ್ನು ಕಿಂಗ್ಸ್ ಇಲವೆನ್ ಪಂಜಾಬ್ ಖರೀದಿ ಮಾಡಿತ್ತು. ಆದರೆ, ಕಳಪೆ ಐಪಿಎಲ್ ನಲ್ಲಿ ಅವರುಹೊಡೆದಿದ್ದು ಕೇವಲ 42 ರನ್ , ಬೌಲಿಂಗ್ ನಲ್ಲಿ ಎರಡು ವಿಕೆಡ್ ಕಿತ್ತಿದ್ದರೂ ಎಕಾನಮಿ 10.50 ಇದೆ. ಇದು ಪಂಜಾಬ್ ತಂಡಕ್ಕೆ ತುಟ್ಟಿ ಆಗಿತ್ತು.
ಸರ್ಫರಾಜ್ ಖಾನ್ : ಮುಂಬೈ ಪರ ರಣಜಿ ಮ್ಯಾಚ್ ನಲ್ಲಿ ಆಡಿದ್ದ ಸರ್ಫರಾಜ್ ಖಾನ್ ಸತತ ಎರಡು ಡಬಲ್ ಸೆಂಚುರಿ ಬಾರಿಸಿದ್ದರು. ಇದರಿಂದ ಇಂಪ್ರೆಸ್ ಆಗಿದ್ದ ಸರ್ಫರಾಜ್ ಅವರನ್ನು ಖರೀದಿಸಿತ್ತು. ಆದರೆ, ಐದು ಪಂದ್ಯಗಳಲ್ಲಿ ಇವರು ಕೇವಲ 33 ರನ್ ಬಾರಿಸಿದ್ದರು.
ಕರುಣ್ ನಾಯರ್ : ಟೆಸ್ಟ್ ಪಂದ್ಯದಲ್ಲಿ ನೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಎನ್ನುವ ಖ್ಯಾತಿ ಕರುಣ್ ನಾಯರ್ ಅವರದ್ದು. ಆದರೆ, ಐಪಿಎಲ್ ಮ್ಯಾಚ್ ನಲ್ಲಿ ಅವರಿಗೆ ಸೂಕ್ತ ರೀತಿಯಲ್ಲಿ ಪ್ರದರ್ಶನ ನೀಡೋಕೆ ಸಾಧ್ಯವಾಗಲಿಲ್ಲ. ಈ ಕನ್ನಡಿಗರನ್ನು ಪಂಜಾಬ್ ತಂಡ ಕೈ ಬಿಡುವ ಎಲ್ಲ ಲಕ್ಷಣಗಳಿವೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?