ರೈಸಿಂಗ್ ಕನ್ನಡ :
ಕುರಿ ಕಾಯ್ತಿದ್ದ ಹುಡುಗ ಹನುಮಂತ, ಗಾಯಕನಾಗಿ ಮಿಂಚಿದ್ದು.. ಇಡೀ ರಾಜ್ಯದ ಜನತೆ ಹನುಮಂತನಿಗೆ ಜೈಕಾರ ಹಾಕಿದ್ದು ಈಗ ಇತಿಹಾಸ. ಈಗ ಹನುಮಂತ ಏನ್ ಮಾಡ್ತಿದ್ದಾನೆ..? ಎಲ್ಲಿದ್ದಾನೆ ಅನ್ನೋ ಪ್ರಶ್ನೆ ಈಗ ಉತ್ತರ ಸಿಗ್ತಿದೆ.
ಯೆಸ್, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8, ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುತ್ತೆ. ಈ ಬಾರಿ ಸೀಸನ್ 8ರಲ್ಲಿ 20 ಸ್ಪರ್ಧಿಗಳು ಇರ್ತಾರೆ. ಫೆಬ್ರವರಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಆರಂಭವಾಗುತ್ತೆ ಅನ್ನೋದನ್ನ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಆದ್ರೆ, ಈ ಶೋನಲ್ಲಿ ಯಾರೆಲ್ಲಾ ಸೆಲಬ್ರಿಟಿಗಳು, ಯಾರೆಲ್ಲಾ ಕಾಮನ್ ಮ್ಯಾನ್ಗಳು ಇರ್ತಾರೆ ಅನ್ನೋ ಚರ್ಚೆ ಜೋರಾಗಿಯೇ ನಡೀತಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿರೋ ಹೊಸ ಹೆಸರು ಅದು ಗಾಯಕ ಹನುಮಂತ.
ಹೌದು, ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯ ಕುರಿ ಕಾಯುವ ಹುಡುಗ, ಇವತ್ತು ಇಡೀ ಕರ್ನಾಟಕವೇ ಗುರುತಿಸೋ ಗಾಯಕ. ಝೀ ಕನ್ನಡ ಸರಿಗಮಪ ರಿಯಾಲಿಟಿ ಶೋ ಮೂಲಕ ಗಾಯಕನಾಗಿ ಹೊರ ಬಂದ ಹನುಮಂತು, ಈ ಬಾರಿಯ ಬಿಗ್ ಬಾಸ್ ಶೋಗೆ ಹೋಗ್ತಾರೆ ಅನ್ನೋ ಮಾತು ಜೋರಾಗಿಯೇ ಕೇಳಿ ಬರ್ತಿದೆ.
ಹಾಗೇ, ನೋಡಿದ್ರೆ 2019ರ ಬಿಗ್ ಬಾಸ್ನಲ್ಲೇ ಹನುಮಂತು ಹೆಸರು ಕೇಳಿ ಬಂದಿತ್ತು. ಆದ್ರೆ, ಆಗ ಝಿ ಕನ್ನಡ ವಾಹಿನಿ ಜೊತೆ ಕಾಂಟ್ರಕ್ಟ್ ಇದ್ದ ಕಾರಣ, ಹನುಮಂತ ಬಿಗ್ ಬಾಸ್ ಶೋಗೆ ಹೋಗಲು ಸಾಧ್ಯವಾಗಿಲ್ಲ.
ಕೊರೋನಾ ಕಾರಣದಿಂದಾಗಿ 2020ರಲ್ಲಿ ಬಿಗ್ ಬಾಸ್ ಶೋ ನಡೆಯಲೇ ಇಲ್ಲ. ಹೀಗಾಗಿಯೇ. ಈಗ 2021ರ ಆರಂಭದಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ, ಸೀಸನ್ 8 ಶುರುವಾಗ್ತಿದೆ. ಈ ಸೀಸನ್ನಲ್ಲಿ ಸೆಲಬ್ರಿಟಿಗಳ ಜೊತೆ ಸಾಮಾನ್ಯ ಜನರೂ ಇರಲಿದ್ದಾರೆ. ಗಾಯಕ ಹನುಮಂತ, ಸಾಮಾನ್ಯರಲ್ಲಿ ಸಾಮಾನ್ಯ. ಜೊತೆಗೆ ಸೆಲಬ್ರಿಟಿಗಳಿಗೆ ಸೆಲಬ್ರಿಟಿ. ಎರಡೂ ವಿಭಾಗದಲ್ಲೂ ಹನುಮಂತ ಬಿಗ್ ಬಾಸ್ ಶೋಗೆ ಹೋಗಲು ಅರ್ಹ ವ್ಯಕ್ತಿ. ಹೀಗಾಗಿ, ಈ ಬಾರಿ ಸೀಸನ್ 8ರ ಬಿಗ್ ಬಾಸ್ನಲ್ಲಿ ಹನುಮಂತು ಇದ್ದೇ ಇರ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ.
ಒಂದ್ವೇಳೆ ಹನುಮಂತ, ಬಿಗ್ ಬಾಸ್ ಶೋ ಎಂಟ್ರಿಯಾದ್ರೆ ಸೂಪರ್ ಆಗಿ ಇರುತ್ತೆ ಅನ್ನೋ ಮಾತು ಕೇಳಿ ಬರ್ತಿದೆ. ಹನುಮಂತ ಸಿಂಗರ್ ಆಗಿದ್ರೂ, ಈಗಲೂ ಮುಗ್ಧನಂತೆ ಇದ್ದಾನೆ. ಒಳ್ಳೇ ಹುಡುಗ ಅನ್ನೋ ಮಾತಿದೆ. ಹೀಗಾಗಿ, ಹನುಮಂತ ಸೆಲಬ್ರಿಟಿ ಜೊತೆಗೆ ಸಾಮಾನ್ಯ ವ್ಯಕ್ತಿ ಆಗಿರೋದ್ರಿಂದ, ಬಿಗ್ ಬಾಸ್ಗೆ ಎಂಟ್ರಿ ಆಗಬಹುದು.
ಅದೇನೇ ಆಗ್ಲಿ, ಹನುಮಂತು ಬಿಗ್ ಬಾಸ್ಗೆ ಹೋಗ್ತಾರಾ ಇಲ್ವೋ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗ್ಲಿದೆ. ಒಂದ್ವೇಳೆ ಹನುಮಂತು ಬಿಗ್ ಬಾಸ್ಗೆ ಹೋದ್ರೆ, ನಮ್ಮ ಕಡೆಯಿಂದಲೇ ಈಗಲೇ ಆಲ್ ದಿ ಬೆಸ್ಟ್ ಹನುಮಂತು..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?