Featured
ಈಶ್ವರಪ್ಪ ಮೂರ್ಖ ಎನ್ನುವುದರ ಬದಲು ಯಡಿಯೂರಪ್ಪ ಮೂರ್ಖ ಎಂದ ಸಿದ್ದು, ಓದಿ..,

ಬೆಳಗಾವಿ: ಸರ್ಕಾರ ಹಾಗೂ ರಾಜಕೀಯ ಮುಖಂಡರನ್ನ ಟೀಕಿಸುವ ಭರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನವರನ್ನ ಮೂರ್ಖ ಎಂದು ಬಿಟ್ರು.
ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡರು, ಪ್ರಧಾನಿ ಮೋದಿ ದೇಶ ವಿದೇಶಕ್ಕೆ ಹಾರುತ್ತಾರೆ ಇಲ್ಲಿ ಬಂದು ಸಮೀಕ್ಷೆ ಮಾಡೋದಕ್ಕೆ ಮನಸಿಲ್ಲ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪಗೆ ಅಮಿತ್ ಶಾ ನೋಡಲು ಸಮಯವೇ ಸಿಗುತ್ತಿಲ್ಲ, ಅಂದು ನಾನು ಹೈಕಮಾಂಡ್ ಕೈಗೊಂಬೆ ಎಂದು ಆರೋಪ ಮಾಡುತ್ತಿದ್ದ ಯಡಿಯೂರಪ್ಪ ಈಗೇನು ..? ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೊಂದಿಷ್ಟು ಭೇಟಿ ನೀಡಿ ಹೋದರು, ಅದರಿಂದ ಯಾವುದೇ ಉಪಯೋಗವಾಗಿಲ್ಲ, ಬಿಜೆಪಿಗೆ ಪೂರ್ಣಾವಧಿ ಸರ್ಕಾರ ನಡೆಸಲು ಜನಾಭಿಪ್ರಾಯ ಇಲ್ಲ ಅದೊಂದು ಪಾಪದ ಶಿಶು ಎಂದರು.
ಈ ಸಂದರ್ಭದಲ್ಲಿ ಈಶ್ವರಪ್ಪ ಹೇಳಿಕೆಯನ್ನ ಟೀಕಿಸುವ ಭರದಲ್ಲಿ ಈಶ್ವರಪ್ಪ ಮೂರ್ಖ ಎನ್ನುವುದನ್ನ ಬಿಟ್ಟು ಯಡಿಯೂರಪ್ಪ ಮೂರ್ಖ ಎಂದರು. ಬಿಎಸ್ ವೈ ಗೆ ಸಲಹೆ ನೀಡಲು ಆರ್ ಎಸ್ ಎಸ್ ಇದೆ, ನಾನೇಕೆ ಕೊಡಲಿ ಎಂದರು, ನೆರೆ ಪರಿಹಾರ ನೀಡದೇ ಇದ್ದರೆ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.
You may like
ಮೈಸೂರು ಗೆಲ್ಲಲು ಕಾಂಗ್ರೆಸ್ ರಣತಂತ್ರ; ಬಿಎಸ್ವೈ ಆಪ್ತರಿಗೆ ಆಪರೇಷನ್!
ಸಿಎಂ ಸಿದ್ದರಾಮಯ್ಯ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ : ಪ್ರಲ್ಹಾದ್ ಜೋಶಿ
ಎಲ್ಲಾ ಸಮೀಕ್ಷೆಗಳಲ್ಲೂ ಬೆಳಗಾವಿಯಲ್ಲಿ ನಾವೇ ಮುಂದು..! – ಸಿಎಂ
ಭಾಗೀದಾರರ ನ್ಯಾಯದ ಐದು ಗ್ಯಾರಂಟಿಗಳು:
ಸಿದ್ದರಾಮಯ್ಯನವರೆ ನಿಮಗೆ ಮಾನ ಮರ್ಯಾದೆ ಇದೆಯಾ.?
ನಮ್ಮ ಗ್ಯಾರಂಟಿ ಯೋಜನೆಗಳು ಜನರ ಬದುಕಿಗಾಗಿ, ಚುನಾವಣೆಗೆ ಅಲ್ಲ