Featured
ಹೆಚ್ಚು ಜವಾಬ್ದಾರಿ ಸಾಕಷ್ಟು ಸಮಸ್ಯೆಗಳು, ಆಗತ್ಯ ಕ್ರಮ : ಕೋಟಾ

ಬೆಂಗಳೂರು: ಬಂದರು, ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಿಧಾನಸಭೆಯಲ್ಲಿಂದು ತಮ್ಮ ಕಚೇರಿಯನ್ನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಪ್ರವೇಶಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಬಂದರು, ಮುಜುರಾಯಿ, ಮೀನುಗಾರಿಕೆ ಹೀಗೆ ಮೂರು ಇಲಾಖೆಗಳ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿದೆ. ಈ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದೇನೆ, ಸೀಮೆಎಣ್ಣೆ, ಡೀಸೆಲ್ ಸಬ್ಸಿಡಿ ಬೇಡಿಕೆ ಇಟ್ಟಿದ್ದಾರೆ, ಮಹಿಳಾ ಮೀನುಗಾರರ ಸಾಲ ಮನ್ನಾ ಬಗ್ಗೆ ಚರ್ಚಿಸುತ್ತೇನೆ, ಮುಜರಾಯಿ ಇಲಾಖೆಯಲ್ಲಂತೂ ಸಾಕಷ್ಟು ಸಮಸ್ಯೆಗಳಿವೆ. ರಾಜ್ಯದಲ್ಲಿ ೨೮ ಸಾವಿರ ದೇವಾಲಯಗಳು ನಮ್ಮ ವ್ಯಾಪ್ತಿಗೆ ಬರುತ್ತವೆ ಹಾಗೂ ದೇಗುಲಗಳ ಅರ್ಚಕರಿಗೆ ನೀಡುತ್ತಿರುವ ೪೮ ಲಕ್ಷ ಸಸ್ತಿಕ್ ಹಣ ತಲುಪುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುತ್ತೇನೆಂದರು.
Continue Reading
Advertisement
You may like
Click to comment