ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಕೊರೊನಾ ಕೊರೊನಾ ಕೊರೊನಾ… ಎಲ್ಲೆಡೆ ಕೊರೊನಾದ್ದೇ ಸುದ್ದಿ. ಕೊಂಚ ಮಟ್ಟಿಗೆ ತಣ್ಣಗಾಗಿದ್ದ ಕೊರೊನಾ ಇದೀಗ ಮತ್ತೆ ಆತಂಕ ಸೃಷ್ಟಿಸಿದೆ. ಹೊಸ ಮಾದರಿಯ ಕೊರೊನಾ ಸೋಂಕು ಬ್ರಿಟನ್ನಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದ್ರೀಗ, ಅದೇ ಹೊಸ ಮಾದರಿಯ ಕೊರೋನಾ ಸೋಂಕು ಭಾರತಕ್ಕೂ ಲಗ್ಗೆ ಇಟ್ಟಿದೆ. ಇಂಗ್ಲೆಂಡ್’ನಿಂದ ಚೆನ್ನೈಗೆ ಆಗಮಿಸಿರುವ ಪ್ರಯಾಣಿಕರೊಬ್ಬರಲ್ಲಿ ಹೊಸ ಮಾದರಿಯ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. ಮಂಗಳವಾರ ಬೆಳಗ್ಗೆ, ಬ್ರಿಟನ್ ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಒಟ್ಟು 15 ಮಂದಿ ಆಗಮಿಸಿದ್ದು, ಅವರಲ್ಲಿ ಒಬ್ಬರಿಗೆ ಹೊಸ ಮಾದರಿಯ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಹಾಗಾದ್ರೆ, ಕೊರೊನಾ ವಿಚಾರದಲ್ಲಿ ತಣ್ಣಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತೆ ಮೈಚಳಿಬಿಟ್ಟು ಮೇಲೇಳಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಾಲೆಗಳ ಪುನರಾರಂಭದ ವಿಚಾರದಲ್ಲಿ ಮತ್ತೊಮ್ಮೆ ಚಿಂತಿಸಬೇಕಿದೆ. ರಾಜ್ಯ ಸರ್ಕಾರ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಜನವರಿಯಿಂದ ತರಗತಿಗಳು ಆರಂಭ ಅನ್ನೋ ಆದೇಶವನ್ನ ಹೊರಡಿಸಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಇದೀಗ ಉದ್ಭವಿಸಿದೆ. ಸಾಮಾನ್ಯ ಕೊರೊನಾ ತಂದಿರೋ ಆತಂಕವೇ ಪೋಷಕರಿಂದ ಇನ್ನೂ ದೂರವಾಗಿಲ್ಲ. ಆದ್ರೀಗ, ಆದ್ರೀಗ ಮತ್ತಷ್ಟು ಅಪಾಯಕಾರಿ ಕೊರೊನಾದ ಹೊಸ ಮಾದರಿ ಸೋಂಕು, ಪೋಷಕರ ನಿದ್ದೆಗೆಡಿಸಿದೆ.
ಅದ್ರಲ್ಲೂ ಇದು ಭಾರತಕ್ಕೆ ಕಾಲಿಟ್ಟಿದೆ. ನೆರೆಯ ತಮಿಳುನಾಡಿನ ಅಂದ್ರೆ, ಚೆನ್ನೈ ಏರ್ಪೋರ್ಟ್ನಲ್ಲೇ ಇದರ ಸೋಂಕು ಪತ್ತೆಯಾಗಿರೋದು ಆತಂಕಕಾರಿವಿಷ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನವರಿಯಲ್ಲಿ ತರಗತಿಗಳು ಆರಂಭವಾಗೋದ್ರಿಂದ, ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟಗಳಾದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳು ಕಲಿಯೋದಾದ್ರೂ ಏನು ಅನ್ನೋ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ ಕೊರೊನಾವನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲದೇ, ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭದ ವಿಚಾರದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.
ಅದಾಗಲೇ ಅರ್ಧವರ್ಷಕ್ಕಿಂತಲೂ ಹೆಚ್ಚಿನ ಸಮಯ ಕೊರೊನಾದಿಂದಾಗಿ ಹಾಳಾಗಿ ಹೋಗಿದೆ. ಸೋ ಉಳಿದಿರೋ 2,3 ತಿಂಗಳಲ್ಲಿ ಶಾಲೆಗಳ ಪುನರಾರಂಭಬೇಕಾ. ಅಥವಾ ಈ ವರ್ಷದ ಶೈಕ್ಷಣಿಕ ನೀತಿಯನ್ನೇ ಬದಲಿಸೋಕೆ ಏನಾದ್ರೂ ಮಾಡಬೇಕು ಅನ್ನೋದ್ರ ಬಗ್ಗೆ ಚಿಂತಿಸಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?