ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಇಂದು ಮಹತ್ವದ ಐಪಿಎಲ್ನ 2ನೇ ಕ್ವಾಲಿಫೈಯರ್ನಲ್ಲಿ ಬಲಿಷ್ಠ ಸನ್ರೈಸರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ.
ಅಬುಧಾಬಿ ಅಂಗಳದಲ್ಲಿ ನಡೆಯಲಿರುವ ಮಹಾ ಯುದ್ದದಲ್ಲಿ ಪ್ರಶಸ್ತಿ ಸುತ್ತಿಗೆ ಹೋಗಲು ಭಾರೀ ಹೋರಾಟವನ್ನ ಮಾಡಲಿವೆ. ಕ್ವಾಲಿಫೈಯರ್ 1ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಫೈನಲ್ಗೆ ಎಂಟ್ರಿ ಕೊಡಲು ಪಣತೊಟ್ಟಿದೆ.
ಇನ್ನು ಸನ್ರೈಸರ್ಸ್ ಮೊನ್ನೆ ಆರ್ಸಿಬಿ ತಂಡವನ್ನ ಬಗ್ಗು ಬಡಿದು ಆತ್ಮವಿಶ್ವಾಸವನ್ನ ಹೆಚ್ಚಿಸಿಕೊಂಡಿದ್ದು ಡೆಲ್ಲಿಗೆ ಡಿಚ್ಚಿ ಕೊಡಲು ಸಜ್ಜಾಗಿದೆ. ಡೆಲ್ಲಿ ವಿರುದ್ಧ ಸನ್ರೈಸರ್ಸ್ ತಂಡ ಗೆಲ್ಲುವ ಫೇವರಿಟ್ ತಂಡ ಎನಿಸಿದೆ. ಯಾಕಂದ್ರೆ ಮೊನ್ನೆ ನಡೆದ ಲೀಗ್ ನ ಎರಡೂ ಪಂದ್ಯಗಳಲ್ಲಿ ಡೆಲ್ಲಿ ವಿರುದ್ಧ ಸನ್ರೈಸರ್ಸ್ ಗೆಲುವು ದಾಖಲಿಸಿದೆ.
ಅಬುಧಾಬಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 15 ರನ್ ಅಂತರದಿಂದ ವಾರ್ನರ್ ಪಡೆ ಗೆದ್ದಿತ್ತು ನಂತರ ದುಬೈನಲ್ಲಿ ನಡೆದ ಪಂದ್ಯದಲ್ಲಿ 88 ರನ್ ಅಂತರದಿಂದ ಗೆದ್ದಿತ್ತು. ಡೆಲ್ಲಿ ತಂಡಕ್ಕೆ ಓಪನರ್ಸ್ಗಳದ್ದೆ ಚಿಂತೆಯಾಗಿದೆ. ಓಪನರ್ಸ್ಗಳಾದ ಶಿಖರ್ ಧವನ್ ಮತ್ತು ಮರಿ ಸಚಿನ್ ಪೃಥ್ವಿ ಶಾ ಒಳ್ಳೆಯ ಓಪನಿಂಗ್ ಕೊಡುತ್ತಿಲ್ಲ. ಶಿಖರ್ ಧವನ್ ಎರಡೂ ಶತಕ ಸಿಡಿಸಿದ್ದು ಬಿಟ್ಟರೇ ಬಿಗ್ ಇನ್ನಿಂಗ್ಸ್ ಕಟ್ಟಿಲ್ಲ. ಪೃಥ್ವಿ ಶಾ ನಂಬಿಕೆಯನ್ನ ಕಳೆದುಕೊಳ್ಳುವಷ್ಟರ ಮಟ್ಟಿಗೆ ಪ್ರದರ್ಶನ ನೀಡಿದ್ದಾರೆ.
ಇನ್ನು ಸನ್ರೈಸರ್ಸ್ ಹೈದ್ರಾಬಾದ್ ತಂಡ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಆರೇಂಜ್ ಆರ್ಮಿಗೆ ಓಪನರ್ ಶ್ರೀವತ್ಸಾ ಗೋಸ್ವಾಮಿ ಅವರ ಫಾರ್ಮ್ ಸಮಸ್ಯೆ ದೊಡ್ಡ ತಲೆ ನೋವಾಗಿದೆ. ಇದು ಬಿಟ್ಟರೇ ಬೇರೆಲ್ಲಾ ವಿಭಾಗಗಗಳಲ್ಲಿ ಸನ್ರೈಸರ್ಸ್ ಬಲಿಷ್ಠವಾಗಿದೆ. ಅಬುಧಾಭಿ ಅಂಗಳದಲ್ಲಿ ಯಾರು ಗೆಲ್ಲುತ್ತಾರೆ. ಫೈನಲ್ನಲ್ಲಿ ಯಾರು ಮುಂಬೈ ಎದುರಾಳಿ ಆಗುತ್ತಾರೆ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?