ರೈಸಿಂಗ್ ಕನ್ನಡ:
ಬೀದರ್:
ಮನೆ ಹಂಚಿಕೆಯಲ್ಲಿ ಅವ್ಯವಹಾರ ವಿಚಾರ ಬಹಿರಂಗ ಚರ್ಚೆಗೆ ದಿನಾಂಕ ನಿಗದಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿದ ವಸತಿ ಯೋಜನೆಯಡಿ ಹಂಚಿಕೆಯಾಗಿರುವ ಮನೆಗಳ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕಳೆದ ಒಂದು ವರ್ಷದಿಂದ ಭಾಲ್ಕಿ ಕ್ಷೇತ್ರದ ಶಾಸಕ, ಕೆಪಿಸಿಸಿಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಬೀದರ್ ಸಂಸದ ಭಗವಂತ್ ಖೊಬಾ ನಡುವೆ ಸಾಕಷ್ಟು ಆರೋಪಪ್ರತ್ಯಾರೋಪ ನಡೆದಿದ್ದವು,
ಅಷ್ಟೆ ಅಲ್ಲಾ ಕಳೆದ ಕೆಲತಿಂಗಳಹಿಂದೆ ವಸತಿ ಸಚಿವ ವಿ.ಸೋಮಣ್ಣ ಭಾಲ್ಕಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಬೀದರ್ ಸಂಸದ ಭಗವಂತ್ ಖೊಬಾ ಈಶ್ವರ್ ಖಂಡ್ರೆ ವಿರುದ್ದ ವಸತಿ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಅಕ್ತಮದ ಬಗ್ಗೆ ದೂರು ಸಲ್ಲಿಸಿದ್ದರು. ಇದನ್ನ ಪರಿಗಣಿಸಿದ ಸಚಿವರು ತನಿಖೆಗೆ ನಡೆಸಿ ಅಕ್ರಮದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ತನಿಖೆಯಲ್ಲಿ ಅಕ್ರಮದ ಬಗ್ಗೆ ಬಯಲಾಗಿದೆ ಎಂದು ಸಂಸದ ಭಗವಂತ್ ಖೊಬಾ ಈಶ್ವರ್ ಖಂಡ್ರೆ ವಿರುದ್ಧ ಆರೋಪ ಮಾಡುತ್ತಿದ್ದರು, ತಪ್ಪು ನಡೆದಿಲ್ಲಾ ಅಕ್ತಮ ವೆಸಗಿಲ್ಲಾ ಎನ್ನುವುದಾದರೆ ಸಾರ್ವಜನಿಕರ ಎದಿರು ಬಹಿರಂಗ ಚರ್ಚೆಗೆ ಬನ್ನಿ ಎಂದು ಪದೆ ಪದೇ ಸವಾಲು ಹಾಕುತ್ತಿದ್ದರು,ಇದಕ್ಕೆ ಪ್ರತ್ಯೂತ್ತರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೀದರ್ ನಲ್ಲಿ ಮಾತನಾಡಿ ನಾನು ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ ನಿಮಗೆ ತಾಕತ್ತಿದ್ದರೆ ನವೆಂಬರ್ 5 ರಂದು ಬೀದರ್ ನ ಗಣೇಶ್ ಮೈದಾನಲದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ದಿನಾಂಕ ನಿಗದಿ ಮಾಡಿದ್ದಾರೆ.
ವಸತಿ ಯೋಜನೆಗಳನ್ನ ಪಡೆದ ಪಲಾನುಭವಿಗಳ ಸಮ್ಮುಖದಲ್ಲಿ ಬೇಗಾದರೆ ನಿಮ್ಮ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟಿಲ್ ಹಾಗೂ ವಸತಿ ಸಚಿವರು ಸಹ ಈ ಚರ್ಚೆಗೆ ಭಾಗವಹಿಸಲಿ ನವೆಂಬರ್ 5 ರಂದು ಬನ್ನಿ ಎಂದು ದಿನಾಂಕ ನಿಗದಿ ಮಾಡಿದ್ದಾರೆ. ಸಂಸದ ಭಗವಂತ್ ಖೊಬಾ ಬಾರದಿದ್ದರು ನಾನು ಬಹಿರಂಗ ಚರ್ಚೆಗೆ ಬಂದೆ ಬರುತ್ತೇನೆ ಎಂದು ಹೇಳಿದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?