Uncategorized
ಅಪಾಯ ಮೀರಿ ಹರಿಯುತ್ತಿದೆ ವಿಜಯಪುರದ ಭೀಮಾ ನದಿ: ಗ್ರಾಮಗಳಿಗೆ ಪ್ರವಾಹ ನೀರು ನುಗ್ಗುವ ಆತಂಕ

ರೈಸಿಂಗ್ ಕನ್ನಡ:
ವಿಜಯಪುರ:
ಭಾರೀ ಮಳೆ ಹಾಗೂ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಿಸಿದ್ದು ವಿಜಯಪುರದ ಪ್ರಮುಖ ನದಿ ಭೀಮಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇಲ್ಲಿನ ಸಿಂದಗಿ ತಾಲೂಕಿನ ತಾರಾಪೂರ ಗ್ರಾಮ ಸಂಪೂರ್ಣ ಜಲಾವೃತ್ತವಾಗಿದೆ.ನೀರಲ್ಲೆ ನಡೆದುಕೊಂಡು ದನ-ಕರುಗಳನ್ನ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ. ನೀರಲ್ಲಿ ಈಜಿಕೊಂಡು ಗ್ರಾಮಸ್ಥರ ಜೊತೆಗೆ ಹೊರ ಬರುತ್ತಿರುವ ಶ್ವಾನಗಳು.ಟ್ರಾಕ್ಟರ್ ಮೂಲಕವು ಜಲಾವೃತ್ತವಾದ ಗ್ರಾಮದಿಂದ ಹೊರ ಜನ ಬರುತ್ತಿದ್ದಾರೆ.

ವಿಜಯಪುರದ ಕೊನೆಯ ಹಳ್ಳಿ ದೇವಣಗಾಂವ ಗ್ರಾಮಕ್ಕು ಪ್ರವಾಹ ಸಂಕಷ್ಟ.ಭೀಮಾತೀರದ ದೇವಣಗಾಂವ ಗ್ರಾಮಕ್ಕೆ ನುಗ್ಗಿ ಭೀಮಾ ಪ್ರವಾಹದ ನೀರು ಬರುತ್ತಿದೆ. ಗ್ರಾಮದ ಆಂಜನೇಯ, ಅಂಬೀಗರ ಚೌಡಯ್ಯ ದೇಗುಲಗಳು ಜಲಾವೃತ್ತವಾಗಿವೆ. 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ದೇವಣಗಾಂವ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಕ್ಷಣಕ್ಷಣಕ್ಕೂ ಪ್ರವಾಹ ಏರುತ್ತಿರುವ ಹಿನ್ನೆಲೆಯಲ್ಲಿ ಆತಂಕ ಮನೆ ಮಾಡಿದ್ದು ಭೀಮಾತೀರದ ಶಂಬೆವಾಡಿ, ಕುಮಸಗಿ ಗ್ರಾಮಗಳಲ್ಲು ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?