ಶಿವಮೊಗ್ಗ/ ಸಾಗರ :: ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡಿದ್ದೇ ತಡ ಆಶ್ಲೇಷ ಮಳೆಯ ಅಬ್ಬರ ಜನರ ಜೀವನವನ್ನ ಮುದ್ದೆಯನ್ನಾಗಿಸಿತು. ಬಿಎಸ್ ವೈ ಸಿಎಂ ಆದಾಗಲೆಲ್ಲಾ ನೆರೆಹಾವಳಿ ಹೀಗಂತ ಮಾಧ್ಯಮಗಳು ಹೇಳ್ತಿಲ್ಲ, ಬಿಜೆಪಿ ಕಾರ್ಯಕರ್ತರೇ ಗುಸುಗುಸು ಎನ್ನುತ್ತಿದ್ದರು. ಪ್ರವಾಹವೊಂದೇ ಆದರೆ ಪರವಾಗಿಲ್ಲ ಮುಳುಗಡೇ ಭಾಗ್ಯವೂ ಬಂದಿದೆ ಎನ್ನುತ್ತಾರೆ ಸಾಗರ ತಾಲೂಕಿನ ಬರೂರು ಗ್ರಾಮಪಂಚಾಯಿತಿ ಜನರು.
ಸಂತ್ರಸ್ಥರೇ ಪುನಃ ಸಂತ್ರಸ್ಥರು
ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಗುಳೇ ಬಂದ ಸಾವಿರಾರು ಜನರು ಪುನಃ ಕಾಡು ಮೇಡುಗಳಲ್ಲಿ ಚದುರಿ ಮನೆ ಹೊಲ ನಿರ್ಮಿಸಿಕೊಂಡಿದ್ದರು, ಸ್ವಭಾವತಃ ಅವರೆಲ್ಲಾ ಕಾಡಿನ ಒಡನಾಡಿಗಳಾದ್ದರಿಂದ ಆಯಕಟ್ಟು ಪ್ರದೇಶದಲ್ಲಿ ನೆಲೆ ಕಂಡುಕೊಂಡು ಐದಾರು ದಶಕಗಳೇ ಆಗಿವೆ. ಅಂತಹದೊಂದು ಗ್ರಾಮದ ಸರಹದ್ದು ಕುಂದೂರು. ಇಲ್ಲೊಂದು ಕಲ್ಲೊಡ್ಡು ಎಂಬ ಹಳ್ಳ ಇದೆ, ಇದಕ್ಕೆ ಮಳೆಗಾಲದಲ್ಲಿ ಕಾಡಿನ ನೀರೆಲ್ಲಾ ಸೇರಿಕೊಂಡು ತೊರೆಯ ತರಹ ಹರಿಯುತ್ತೆ, ಇದನ್ನೇ ಹಿಡಿದು ನಿಲ್ಲಿಸಿದರೆ ಹೇಗೆ ಎಂಬ ಲೆಕ್ಕಾಚಾರವೊಂದು ಬಹಳ ಹಿಂದೆಯೇ ಮೊಳಕೆಯೊಡೆದು ಈಗ ಹೆಮ್ಮರವಾಗಿದೆ. ಹಳ್ಳದ ಸುತ್ತ ಮನೆ ಜಮೀನು ಮಾಡಿಕೊಂಡ ಎಂಟುನೂರು ಕುಟುಂಬಗಳು ಒಕ್ಕಲೆಬ್ಬಿಸುವ ಭೀತಿಯಿಂದ ದಿನದೂಡುತ್ತಿವೆ.
ಸಾಗರ ಮುಳುಗಿಸಿ ಶಿಕಾರಿಪುರಕ್ಕೆ ನೀರು
ಕಾಗೋಡು ತಿಮ್ಮಪ್ಪನಂತ ಹಿರಿಯ ರಾಜಕಾರಣಿಯೂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವ ಹಂತಕ್ಕೆ ಬಿಎಸ್ ಯಡಿಯೂರಪ್ಪನವರು ತಂದಿದ್ದಾರೆ ಎನ್ನುವುದಕ್ಕೆ ಸೋಮವಾರ ಸಾಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯೇ ಸಾಕ್ಷಿಯಾಯ್ತು. ಯೋಜಿತ ಕಲ್ಲೊಡ್ಡು ಹಳ್ಳಕ್ಕೆ ಡ್ಯಾಂ ನಿರ್ಮಿಸಿ ಶಿಕಾರಿಪುರ ತಾಲೂಕಿನ ಜಮೀನುಗಳನ್ನ ನೀರಾವರಿ ಮಾಡಿ, ಕುಡಿಯುವ ನೀರನ್ನೂ ಪೂರೈಸಲು ಬಿಎಸ್ ಯಡಿಯೂರಪ್ಪ ೧೨೧ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಸರ್ವೇ ಕಾರ್ಯವೂ ಮುಗಿದು ಶಂಕುಸ್ಥಾಪನೆ ಮಾತ್ರ ಬಾಕಿ ಇದೆ. ಈ ಭಾಗದಲ್ಲಿರುವ ಜನರು ಅಂದು ಶರಾವತಿಯಿಂದ ಅನ್ಯಾಯಕ್ಕೊಳಗಾಗಿದ್ದವರು. ಈಗ ಇಲ್ಲಿಯೂ ಖಾತೆಯಲ್ಲದ ಕಾಡು ಮೇಡಲ್ಲಿ ಜೀವನ ನಡೆಸಿದ್ದವರನ್ನ ನಡುನೀರಲ್ಲಿ ಮುಳುಗಿಸುವ ಯೋಜನೆಗೆ ಬಿಎಸ್ ವೈ ಕೈ ಹಾಕಿದ್ದಾರೆ. ಮೊದಲ ಹಂತದ ಪ್ರತಿಭಟನೆ ಯಶಸ್ವಿಯಾಗಿದ್ದು ಮುಂದೇನಾಗತ್ತೆ ನೋಡಬೇಕು.
ಕೊರೊನಾ ಸೋಂಕಿಗೆ ಸ್ವಾಮೀಜಿ ಬಲಿ – ದೈವಾದೀನರಾದ ಹೊನ್ನಾಳಿ ರಾಂಪುರ ಹಾಲುಸ್ವಾಮಿ ಮಠದ ಶ್ರೀಗಳು
ಕೊರೊನಾಕ್ಕೆ ಮದ್ದು ಅರೆದ ಈಶ್ವರಪ್ಪ- ಮಲೆನಾಡಿನಲ್ಲಿ ಕೋವಿಡ್ ಕಡಿವಾಣಕ್ಕೆ ಹೊಸ ಸೂತ್ರ..!
ಬೆಳಗ್ಗೆ 10 ಗಂಟೆವರೆಗೂ ಮನೆಯಿಂದ ಹೊರ ಬರ್ಬೇಡಿ..! ಸಂಜೆ 6 ಗಂಟೆಯೊಳಗೆ ಮನೆ ಸೇರ್ಕೊಂಡುಬಿಡಿ..! – ಇಲ್ಲಾಂದ್ರೆ, ಅಷ್ಟೆ ನಿಮ್ ಕಥೆ..!
ನರಸೀಪುರದ ಕ್ಯಾನ್ಸರ್ ವೈದ್ಯ ದೈವಾಧೀನ- “ಸಣ್ಣಯ್ಯ”ಅಜ್ಜನಿಗೆ ಶ್ರದ್ಧಾಂಜಲಿ
ಕನ್ನಡ ಮಾತೃಭಾಷೆ ಆದರೆ ಹಿಂದಿ ಮಾತೃ : ಕೆಎಸ್ ಈಶ್ವರಪ್ಪ
ಸಿದ್ದರಾಮಯ್ಯ ವಡ್ಡ, ಮತ್ತೆ ನಾಲಗೆ ಹರಿಬಿಟ್ಟ ಈಶ್ವರಪ್ಪ..!