Featured
ಚಿದಂಬರಂಗೆ ಮತ್ತಷ್ಟು ದಿನ ಜೈಲೂಟವೇ ಗತಿ : ಕೋರ್ಟ್ನಲ್ಲಿ CBI ಹೇಳಿದ್ದೇನು ಗೊತ್ತಾ..?

ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಮತ್ತಷ್ಟು ದಿನ ಜೈಲೇ ಗತಿಯಾಗಿದೆ. ಶುಕ್ರವಾರದವರೆಗೆ ಸಿಬಿಐ ಕಸ್ಟಡಿಯನ್ನ ದೆಹಲಿಯ ವಿಶೇಷ ಕೋರ್ಟ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಇನ್ನೂ ನಾಲ್ಕು ದಿನ ಪಿ.ಚಿದಂಬರಂ ಜೈಲಲ್ಲೇ ಕಾಲ ಕಳೆಯಬೇಕಿದೆ.
ಭ್ರಷ್ಟಾಚಾರ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರೋ ಚಿದಂಬರಂ ಅವರ ಬಂಧನ ಅವಧಿ ಇವತ್ತಿಗೆ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನ ಕೋರ್ಟ್ ಮುಂದೆ ಹಾಜರು ಪಡಿಸಲಾಯ್ತು. ಈ ವೇಳೆ, ಚಿದಂಬರಂ ಅವರ ಹೆಚ್ಚಿನ ವಿಚಾರಣೆಗೆ ಮತ್ತಷ್ಟು ದಿನ ಕಸ್ಟಡಿಗೆ ನೀಡುವಂತೆ ಸಿಬಿಐ ಅಧಿಕಾರಿಗಳು ಕೋರ್ಟ್ಗೆ ಮನವಿ ಮಾಡಿದ್ರು. ಸಿಬಿಐ ಅಧಿಕಾರಿಗಳ ಮನವಿ ಪುರಸ್ಕರಿಸಿದ ಕೋರ್ಟ್, ನಾಲ್ಕು ದಿನ ಕಸ್ಟಡಿ ಮುಂದುವರೆಸುವಂತೆ ಸೂಚನೆ ನೀಡ್ತು.
ಸಿಬಿಐ ವಿಚಾರಣೆಗೆ ಸಹಕರಿಸುತ್ತಿಲ್ವಾ ಚಿದಂಬರಂ..?
ಕೋರ್ಟ್ನಲ್ಲಿ ವಾದ ಮಂಡಿಸಿದ ಸಿಬಿಐ ಪರ ವಕೀಲರು, ವಿಚಾರಣೆಗೆ ಚಿದಂಬರಂ ಸಹಕರಿಸುತ್ತಿಲ್ಲ. ಹೀಗಾಗಿ, ಇನ್ನೂ ಹೆಚ್ಚಿನ ವಿಚಾರಣೆ ನಡೆಸಬೇಕಿದ್ದು, ಕಸ್ಟಡಿ ಮುಂದುವರಿಸಬೇಕು ಎಂದು ಮನವಿ ಮಾಡಿದ್ರು. ಇದಕ್ಕೆ ಚಿದು ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ರು. ಆದ್ರೆ, ಕೊನೆಗೆ ಸಿಬಿಐ ಕಸ್ಟಡಿ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿತು.
ಈ ನಡುವೆ, ಸುಪ್ರೀಂಕೋರ್ಟ್ನಲ್ಲಿ ಚಿದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬರಲೇ ಇಲ್ಲ. ಈ ಹಿಂದೆ ಕೂಡ ಸಿಬಿಐನಿಂದ ಬಂಧನ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ವಿಚಾರಣೆಗೆ ತೆಗೆದುಕೊಳ್ಳಲೇ ಇಲ್ಲ. ಜೊತೆಗೆ ಇಡಿಯಿಂದ ರಕ್ಷಣೆ ಕೋರಿ ಕೂಡ ಚಿದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ರು. ಅದನ್ನೂ ಸುಪ್ರೀಂ ನಯವಾಗಿಯೇ ತಿರಸ್ಕರಿಸಿತ್ತು. ಒಟ್ಟಿನಲ್ಲಿ, ಚಿದಂಬರಂಗೆ ಕೆಟ್ಟ ದಿನಗಳು ಶುರುವಾಗಿರೋದಂತೂ ಸತ್ಯ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?