ಬೆಂಗಳೂರು : ನಟಿ, ಸಂಸದೆ ಸುಮಲತಾ ತುಂಬಾ ಭಾವುಕರಾಗಿದ್ದಾರೆ. ಪತಿ, ರಾಜಕಾರಣಿ, ನಟ ಅಂಬರೀಷ್ ನಿಧಿನಹೊಂದಿ 9 ತಿಂಗಳು ಕಳೆದಿದೆ. ಈ 9 ತಿಂಗಳಲ್ಲಿ ಅಂಬಿ ಇಲ್ಲದ ನೋವು ತುಂಬಾ ಕಾಡಿದೆ. 27 ವರ್ಷ ಜೊತೆಯಲ್ಲಿದ್ದು, ಈಗ ಇಲ್ಲ ಅನ್ನೋದನ್ನ ನೆನೆಯಲು ಕೂಡ ಸಾಧ್ಯವಿಲ್ಲ ಎಂದು ನೋವನ್ನ ತೋಡಿಕೊಂಡಿದ್ದಾರೆ.
ಅಂಬಿಯ 9ನೇ ಪುಣ್ಯತಿಥಿ ಬಳಿಕ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರೋ ಸುಮಲತಾ, ಅಂಬಿ ನನ್ನಿಂದ ದೂರಾಗಿ 9 ತಿಂಗಳಾಯ್ತು. ಅಂಬಿ ಇಲ್ಲದ ಜೀವನ ಹೇಗಿರುತ್ತೆ ಅನ್ನೋದನ್ನ ಕಳೆದ 9 ತಿಂಗಳಲ್ಲಿ ಕಾಲ ನನಗೆ ಕಲಿಸಿದೆ. ನಿನ್ನ ಜೊತೆ ಇದ್ದ 27 ವರ್ಷ ಸುಂದರ, ಮಧುರ ಕ್ಷಣಗಳು. ಮರೆಯಲು ಅಸಾಧ್ಯ. ನಿನ್ನ ಜೊತೆ ಇದ್ದ ಎಲ್ಲಾ ದಿನಗಳು ನನಗೆ ನೆನಪಾಗುತ್ತಿವೆ. ನನಗೆ ಗೊತ್ತು, ನೀನೂ ಎಲ್ಲೇ ಇದ್ದರೂ, ನಿನ್ನ ಸುತ್ತಮುತ್ತಲಿನ ಜನ ಚೆನ್ನಾಗಿರಲಿ ಎಂದು ಹಾರೈಸುತ್ತೀಯ.
ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರೋ ಸುಮಲತಾ, ಅಂಬಿ ಜೊತೆಗಿನ ಫೋಟೋವನ್ನ ಫೋಸ್ಟ್ ಮಾಡಿ ಭಾವುಕತೆಯನ್ನ ವ್ಯಕ್ತಪಡಿಸಿದ್ದಾರೆ.
ಸದ್ಯ ಸಂಸದೆಯಾಗಿರೋ ಸುಮಲತಾ, ಮಂಡ್ಯ ಜನರಿಗೆ ಅಮ್ಮ ಆಗಿದ್ದಾರೆ. ಇಡೀ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿ, ಜನರ ಭಾವನೆಗಳು, ಸಮಸ್ಯೆಗಳಿಗೆ ಸ್ಪಂದಿಸೋ ಕೆಲಸವನ್ನ ಸುಮಲತಾ ಮಾಡ್ತಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?