Featured
ಮುಂಗಾರು ಅಧಿವೇಶನ: ಸೈನಿಕರ ಪರವಾಗಿ ಒಂದು ಧ್ವನಿಯಾಗಿ ಸಂಸತ್: ಪ್ರಧಾನಿ ಮೋದಿ ವಿಶ್ವಾಸ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಗಡಿ ಕಾಯುತ್ತಿರುವ ಸೈನಿಕರ ಬಗ್ಗೆ ಸಂಸತ್ತು ಒಂದಾಗಿ ನಿಂತು, ಒಂದು ಧ್ವನಿಯಾಗಿ ಸಂದೇಶ ಕೊಡುತ್ತೆ ಎನ್ನುವ ಆತ್ಮವಿಶ್ವಾಸ ನನಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೊನಾ ಭೀತಿ ನಡುವೆ ಸೋಮವಾರ ಮುಂಗಾರು ಅಧಿವೇಶನ ಆರಂಭವಾಗಿದೆ. ಕಲಾಪದ ದಿನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಡಿಯಲ್ಲಿ ನಮ್ಮ ಸೈನಿಕರು ಬೆಟ್ಟ ಮತ್ತು ಕ್ಲಿಷ್ಟ ಸನ್ನಿವೇಶದಲ್ಲಿ ಗಡಿ ಕಾಯುತ್ತಿದ್ದಾರೆ.
ಸಂಸತ್ತು ಒಂದು ಭಾವನೆ, ಒಂದು ಧ್ವನಿ ಮತ್ತು ಪ್ರತಿಜ್ಞೆಯೊಂದಿಗೆ ನಮ್ಮ ಸೈನಿಕರಿಗೆ ಒಂದು ಸಂದೇಶ ಕೊಡುತ್ತಾರೆ ಎನ್ನುವ ಭರವಸೆ ಇರುವುದಾಗಿ ಹೇಳಿದರು.
ನಾವು ಸೈನಿಕರ ಜೊತೆ ನಿಂತಿದ್ದೇವೆ ಎನ್ನುವ ಸಂದೇಶವನ್ನ ಸಂಸತ್ತು ರವಾನಿಸುತ್ತದೆ. ಕೊರೊನಾ ಸಂದರ್ಭದಲ್ಲಿ ಸುರಕ್ಷಿತವಾಗಿರಿ. ಇದು ನನ್ನ ವೈಯಕ್ತಿಕ ಪ್ರಾರ್ಥನೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















