ಬೆಂಗಳೂರು : ಕುರಿಗಾಯಿ ಹನುಮಂತು, ಗಾಯಕನಾಗಿ ಬದಲಾದ ಕಥೆ ಬಹುತೇಕ ಕನ್ನಡಿಗರಿಗೆ ಗೊತ್ತಿದೆ. ಅಷ್ಟರ ಮಟ್ಟಿಗೆ ಹನುಮಂತು ಕನ್ನಡಿಗರ ಮನೆ ಮಾತಾಗಿದ್ದಾರೆ. ಝಿ ಕನ್ನಡ ವಾಹಿನಿಯ ಫೇಮಸ್ ರಿಯಾಲಿಟಿ ಶೋ ಆಗಿದ್ದ ಸರಿಗಮಪ ಶೋನಲ್ಲಿ ಹನುಮಂತು ಗಾಯಕರಾಗಿ ಭಾಗಿಯಾಗಿದ್ರು. ತಮ್ಮ ಅಮೋಘ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ರು. ಆದ್ರೆ, ಸರಿಗಮಪ ಶೋನಲ್ಲಿ ರನ್ನರ್ ಅಪ್ ಆಗಿದ್ರು.
ಹನುಮಂತು ರನ್ನರ್ ಅಪ್ ಆಗಿದ್ದರೂ, ಶೋನ ಪ್ರಯೋಜಕರು ಹನುಮಂತುಗೆ 15 ಲಕ್ಷ ರೂ. ಮೌಲ್ಯದ ಸೈಟ್ ನೀಡೋದಾಗಿ ಸ್ಪೆಷಲ್ ಗಿಫ್ಟ್ ಘೋಷಣೆ ಮಾಡಿದ್ರು. ಆದ್ರೀಗ, 15 ಲಕ್ಷದ ಸೈಟ್ ಬದಲಿಗೆ, ಹನುಮಂತುಗೆ ಫ್ಲಾಟ್ ನೀಡಿದೆ ಕಾನ್ಫಿಡೆಂಟ್ ಗ್ರೂಪ್. ಸದ್ಯ, ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋದಲ್ಲೂ ಹನುಮಂತು ಸ್ಪರ್ಧಿ ಆಗಿದ್ದಾರೆ. ಈ ಶೋಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾನ್ಫಿಡೆಂಟ್ ಗ್ರೂಪ್ನ ಚೇರ್ಮೆನ್ ಸಿ.ಜೆ. ರಾಯ್, ಹನುಮಂತುಗೆ ಫ್ಲಾಟ್ ನೀಡೋದಾಗಿ ಘೋಷಿಸಿದರು. ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ಹಸ್ತಾಂತರಿಸಿದ್ರು.
ಫ್ಲಾಟ್ ಸಿಕ್ಕ ಖುಷಿಯಲ್ಲಿ ಹನುಮಂತುಗೆ ಮಾತುಗಳೇ ಹೊರಡಲಿಲ್ಲ. ನನ್ನ ಜೀವನ ಇರೋವರೆಗೆ ತಮಗೆ ಚಿರಋಣಿ ಎಂದ ಹನುಮಂತು, ತಮ್ಮನ್ನು ಎಂದೆಂದಿಗೂ ಮರೆಯಲ್ಲ ಎಂದು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ರಾಯ್ಗೆ ತಿಳಿಸಿದ್ರು. ಇದೇ ವೇಳೆ, ಮಾತ್ನಾಡಿದ ರಾಯ್, ಹನುಮಂತು ಮುಗ್ದತೆ ನನಗೆ ಇಷ್ಟವಾಯ್ತು. ಮೊದಲು ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ನಾನೂ ಸೈಟ್ ಕೊಟ್ರೆ, ಮನೆ ಕಟ್ಟಲು ಎಷ್ಟು ವರ್ಷ ಬೇಕಾಗುತ್ತೋ ಗೊತ್ತಿಲ್ಲ. ಹೀಗಾಗಿ, ನಾನೇ ಫ್ಲಾಟ್ ನೀಡ್ತಿದ್ದೇನೆ ಎಂದು ಫ್ಲಾಟ್ನ ದಾಖಲು ಪತ್ರಗಳನ್ನ ನೀಡಿದ್ರು.
ಝಿ ಕನ್ನಡ ವಾಹಿನಿ ಹಾಗೂ ಕಾನ್ಫಿಡೆಂಟ್ ಗ್ರೂಪ್ಗೆ ನಾನು ಆಭಾರಿ ಎಂದು ಹನುಮಂತು ಹೇಳಿದ್ರು. ಅದೇನೇ ಆಗ್ಲಿ, ಹಾವೇರಿಯ ಕುರಿಗಾಯಿ ಆಗಿದ್ದ ಹನುಮಂತು ಈಗ ಬೆಂಗಳೂರಿನಲ್ಲಿ ಫ್ಲಾಟ್ನ ಒಡೆಯ. ಸರಿಗಮಪ ಶೋ ಮೂಲಕ ಜರ್ನಿ ಶುರು ಮಾಡಿರೋ ಹನುಮಂತು, ಸಿನಿಮಾಗೂ ಕೂಡ ಹಾಡುಗಳನ್ನ ಹಾಡ್ತಿದ್ದಾರೆ. ಹಿನ್ನೆಲೆ ಗಾಯಕರಾಗ್ತಿದ್ದಾರೆ. ಇದರ ಜೊತೆ ಡ್ಯಾನ್ಸ್ ಶೋನಲ್ಲೂ ಭಾಗಿಯಾಗಿದ್ದಾರೆ. ಹೀಗೇ, ಹನುಮಂತು ಜರ್ನಿ ಸಕ್ಸಸ್ ಫುಲ್ ಆಗಿ ನಡೆಯಲಿ ಎಂದು ಹಾರೈಸೋಣ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?