Featured
ಸೆ.29ರಿಂದ ಮೈಸೂರು ದಸರಾ ವೈಭವ:

ವಿಶ್ವ ವಿಖ್ಯಾತ ಮೈಸೂರು ದಸರಾ 2019 ರ ಕಾರ್ಯಕಾರಿ ಸಮಿತಿ ಸಭೆ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಪೂರ್ಣಗೊಂಡಿದ್ದು ದಸರಾ ಮುಹೂರ್ತ ಘೋಷಣೆ ಮಾಡಲಾಗಿದೆ.
ಸೆಪ್ಟೆಂಬರ್ 29ರಂದು ಬೆಳಗ್ಗೆ 9.30ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರು ದಸರಾ ಉದ್ಘಾಟನೆ ಮಾಡಲಿದ್ದಾರೆ.
ಅಂದು ಸಂಜೆ 7.30ಕ್ಕೆ ಅರಮನೆಯಲ್ಲಿ ಸಿಎಂ ಯಡಿಯೂರಪ್ಪನವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ.
ಅಕ್ಟೋಬರ್ 8ರಂದು ಸಮಯ 2.15ರಿಂದ 2.58ರ ಮಕರ ಲಗ್ನದಲ್ಲಿ ನಂದಿ ಪೂಜೆ ನೆರವೇರಲಿದೆ. ಅಕ್ಟೋಬರ್ 8ರಂದು ಸಂಜೆ 4.31ರಿಂದ 4.57ರವರೆಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿನ ದೇವಿಗೆ ಪುಷ್ಪರ್ಚನೆ ಕಾರ್ಯಕ್ರಮ ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳೂ ಶಾಸ್ತ್ರ ಸಂಪ್ರದಾಯಬದ್ಧವಾಗಿ ನಡೆಯಲಿವೆ.
You may like
ದಸರಾ: ಜಂಬೂ ಸವಾರಿಗೆ ಅಭಿಮನ್ಯು ನೇತೃಥ್ವದ ಗಜಪಡೆ ಪಯಣ ಅರಂಭ
ಕೊರೊನಾ ಭೀತಿ ಹಿನ್ನಲೆ: ಸರಳ ದಸರಾ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ
ಚಾಮುಂಡಿ ತಾಯಿಯ ಪೂಜೆಗೂ ತಟ್ಟಿದ ಕೊರೊನಾ ಬಿಸಿ- ಭಕ್ತರೇ ಇಲ್ಲದ ನಡೆಯಿತು ಆಷಾಢ ಶುಕ್ರವಾರದ ವಿಶೇಷ ಪೂಜೆ
ಕಂಕಣ ಸೂರ್ಯಗ್ರಹಣ ಎಲ್ಲೆಲ್ಲಿ ಹೇಗಿತ್ತು..? ರೈಸಿಂಗ್ ಕನ್ನಡ ಕ್ಯಾಮರಾ ಚಿತ್ರಗಳು
ಹುಣಸೂರು ಕ್ಷೇತ್ರದಿಂದ ಸಿಪಿ ಯೋಗೇಶ್ವರ್ ಸ್ಪರ್ಧೆ ಫಿಕ್ಸ್..? : EXCLUSIVE
ಡಿಕೆ ಶಿವಕುಮಾರ್ ದಕ್ಷಿಣ ಯಾತ್ರೆಗೆ ಭರ್ಜರಿ ಸ್ವಾಗತ : ಡಿಕೆಶಿ ಉದ್ದೇಶವಾದರೂ ಏನು.?