ರೈಸಿಂಗ್ ಕನ್ನಡ:
ಯಾದಗಿರಿ:
ಇತ್ತಿಚೆಗೆ ಬರೀ ಮನುಷ್ಯರಿಗೆ ಮಾತ್ರವಲ್ಲ ಜಾನುವಾರುಗಳಿಗೂ ಕ್ವಾರಂಟೈನ್ ಮಾಡಿದ್ದು ನಿಮಗೆಲ್ಲಾ ಗೊತ್ತಿರೋ ವಿಚಾರ ಇದೀಗ ಜಿಲ್ಲೆಯ ಜಾನುವಾರುಗಳಲ್ಲಿ ಹೊಸ ವೈರಸ್ವೊಂದು ಕಾಣಿಸಿಕೊಂಡಿದೆ.
ಜಿಲ್ಲೆಯ ಶಹಾಪುರ, ಗುರುಮೀಠಕಲ್ ಹಾಗೂ ಯಾದಗಿರಿ ತಾಲೂಕಿನಲ್ಲಿ ಲಿಂಪಿ ವೈರಸ್ ಕಾಣಿಸಿಕೊಂಡಿದೆ. ಸಾವಿರಕ್ಕೂ ಹೆಚ್ಚು ಜಾನುವಾರುಗಳು ಲಿಂಪಿ ವೈರಸ್ ದಾಳಿಗೆ ತುತ್ತಾಗಿದ್ದು ರೈತರು ಆತಂಕ ಪಡುಂತಾಗಿದೆ. ಈ ಬಗ್ಗೆ ಶಹಾಪುರ ತಾಲೂಕಿನ ರೈತರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ನೋವು ತೋಡಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿಂದ ಜಿಲ್ಲೆಯ ಲಿಂಪಿ ವೈರಸ್ ಹರಿಡಿದ್ದು, ಕೊರೋನಾ ದಂತೆ ಸಿಂಟೇಮ್ಸ್ ಇದ್ರು ಇದು ಕೊರೋನಾ ಅಲ್ಲ ಲಿಂಪಿ ಚರ್ಮ ಕಾಯಿಲೆ ಎನ್ನಲಾಗಿದೆ. ಯಾದಗಿರಿ ಜಿಲ್ಲಾ ಪಶು ನಿರ್ದೇಶಕ ಡಾ. ಶರಣುಭೂಪಾಲರೆಡ್ಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಿಂಪಿ ಸ್ಕಿನ್ ವೈರಸ್ ಇದು ಮೊದಲು ಒರಿಸಾ, ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಯಾದಗಿರಿ ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡ ಆಂಧ್ರಪ್ರದೇಶದ ಮೂಲಕ ಯಾದಗಿರಿ ಜಿಲ್ಲೆಯ ಜಾನುವಾರುಗಳಿಗೆ ಲಿಂಪಿ ಸ್ಕಿನ್ ರೋಗ ತಗುಲಿರುವ ಸಂಶಯ ವ್ಯಕ್ತಪಡಿಸಿದ್ದಾರೆ.
ಲಿಂಪಿ ಸ್ಕಿನ್ ವೈರಸ್ ಜಾನುವಾರುಗಳಲ್ಲಿ ನಿಶ್ಯಕ್ತಿ, ತಣ್ಣು ಹುಣ್ಣೆ, ಮೈಯೆಲ್ಲ ಗುಳ್ಳೆ, ತುರಿಕೆ ಹಾಗೂ ವಿಪರೀತ ಜ್ವರದಿಂದ ಜಾನುವಾರುಗಳ ಬಳಲುತ್ತಿದ್ದು, ಇವುಗಳನ್ನು ಪಶು ವೈದ್ಯರಿಗೆ ತೋರಿಸಿದ್ದಾಗ ಲಿಂಪಿ ರೋಗ ಇರುವುದು ದೃಢಪಟ್ಟಿದೆ.
ಲಿಂಪಿ ರೋಗ ಹರಡಿದ ಜಾನುವಾರುಗಳನ್ನು ಪ್ರತ್ಯೇಕವಾಗಿ ಇರಿಸಬೇಕು, ಯಾವುದೇ ಜಾನುವಾರುಗಳ ಜೊತೆ ಬಿಡಬಾರದು, ಐದು ದಿನಗಳ ಕಾಲ ಜಾನುವಾರುಗಳಿಗೆ ಕ್ವಾರಂಟೈನ್ ಮಾಡ್ಬೇಕು ಎಂದಿದ್ದಾರೆ. ಈ ಲಿಂಪಿ ಸ್ಕಿನ್ ರೋಗಕ್ಕೆ ಯಾವುದೇ ಔಷಧಿ ಇಲ್ಲ, ಶಕ್ತಿ ಹೆಚ್ಚಿಸಿಕೊಳ್ಳುವ ಔಷಧ ಮೇವು ನೀಡಬೇಕು ಎನ್ನುತ್ತಿದ್ದಾರೆ ಪಶುವೈದ್ಯರು.
ಯಾದಗಿರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸಾವಿರೆ ಹೆಚ್ಚು ಜಾನುವಾರುಗಳಿಗೆ ಲಿಂಪಿ ವೈರಸ್ ತಗಲಿದೆ ಜನರು ಎಚ್ಚರ ವಹಿಸಬೇಕೆಂದು ಪಶು ವೈದ್ಯರು ತಿಳಿಸಿದ್ದಾರೆ. ಕೊರೊನಾ ವೈರಸ್ ನಡುವೆ ಜಾನುವಾರುಗಳಿಗೆ ಮತ್ತೊಂದು ವೈರಸ್ ತಗುಲಿರುವುದು ಜಿಲ್ಲೆಯ ಜನರಲ್ಲಿ ಸಾಕಷ್ಟು ಭಯ ಭೀತಿ ಹುಟ್ಟಿಸಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?