Connect with us

Featured

ಗೋಗರೆದರೂ ಬಾರದ ಅಧಿಕಾರಿಗಳು, ಹಳ್ಳಿಗರೇ ನಿರ್ಮಿಸಿದರು ಕಾಲು ಸಂಕ : ಓದಲೇ ಬೇಕು ಈ ಸ್ಟೋರಿ

ಶಿವಮೊಗ್ಗ: ಸಾಗರ ತಾಲೂಕಿನ ತುಮರಿ ಗ್ರಾಮಪಂಚಾಯಿತಿ ಶರಾವತಿ ನದಿ ತೀರದ ದ್ವೀಪ ಪ್ರದೇಶ, ಲಿಂಗನಮಕ್ಕಿ ಜಲಾಶಯದಿಂದ ಮುಳುಗಡೆಯಾಗಿ ಆಸ್ತಿ – ಮನೆ ಕಳೆದುಕೊಂಡವರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಗ್ರಾಮ ಪಂಚಾಯಿತಿ ಸಾಗರ ನಗರದ ಸಂಪರ್ಕಕ್ಕೆ ಬರಲು ಸಿಗಂದೂರು ಲಾಂಚ್ ಬಳಸಬೇಕು ಅಥವಾ ಅರವತ್ತು ಕಿಲೋಮೀಟರ್ ಸುತ್ತಿಕೊಂಡು ಬರಬೇಕು. ಏನೇ ಸಮಸ್ಯೆಯಾದರೂ ಆಡಳಿತ ವರ್ಗಕ್ಕೆ ಮುಟ್ಟುವುದು ತಡವಾಗಿ.

ಕಳೆದ ವಾರ ಸುರಿದ ಆಶ್ಲೇಷ ಮಳೆಗೆ ಸಾಗರವೂ ಕೂಡ ಸಾಕಷ್ಟು ಹಾನಿಯಾಗಿತ್ತು, ಇಲ್ಲಿನ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಟ್ಟು ಸಂಪರ್ಕ ಸೇತುವಾದ ದಂಡೆ ಕುಸಿದು ಆಚೀಚೆ ಸಂಚಾರ ನಿಷೇಧವಾಗಿತ್ತು. ಹತ್ತಾರು ಹಳ್ಳಿಗಳೂ ಸಂಪರ್ಕ ಕಳೆದುಕೊಂಡವು.

ಗ್ರಾಮ ಪಂಚಾಯಿತಿ ಉತ್ಸಾಹಿ ಅಧ್ಯಕ್ಷ ಜಿಟಿ ಸತ್ಯನಾರಾಯಣ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಷಯ ತಲುಪಿದರು, ಎಷ್ಟು ಗೋಗರೆದರೂ ಯಾರೂ ಸುಳಿಯಲಿಲ್ಲ. ಆಗ ಜನರೇ ಸೇರಿಕೊಂಡು ಕಾಲುಸಂಕ ನಿರ್ಮಾಣಕ್ಕೆ ಮುಂದಾದರು.

ಮುಂಜಾನೆಯೇ ಹದಿನಾಲ್ಕು ಮನೆಯ ಸದಸ್ಯರೆಲ್ಲಾ ( ಮಹಿಳೆಯರು ಹಾಗೂ ಮಕ್ಕಳು) ಸೇರಿ ದಿಮ್ಮಿಗಳನ್ನ ಜೋಡಿಸಿ, ಶುದ್ಧ ಹಳ್ಳಿಯ ಶೈಲಿಯಲ್ಲಿ ಮೂರು ಕಾಲು ಸಂಕಗಳನ್ನ ಸಂಜೆಯೊಳಗೇ ಮಾಡಿ ಮುಗಿಸಿದರು. ಅಡಕೆ ದಬ್ಬೆ ಜೋಡಿಸಿ ಸುಮಾರು 75 ಅಡಿ ಉದ್ದದ ಸೇತುವೆ ನಿರ್ಮಾಣಮಾಡಿದ್ದಾರೆ.

ಈ ಕುರಿತು ಮಾತನಾಡಿದ ತುಮರಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿಟಿ ಸತ್ಯನಾರಾಯಣ, ಇಂಥಹ ಅವಘಡಗಳು ಸಂಭವಿಸಿದಾಗ ನಿಯಮಾವಳಿ, ಅನುದಾನ ಎಂದು ನೋಡಲು ಸಾಧ್ಯವಿಲ್ಲ, ಸುಮಾರು ಹದಿನೈದು ಸಾವಿರ ರುಪಾಯಿ ಕೆಲಸಕ್ಕೆ ಕನಿಷ್ಠ ತಿಂಗಳಾದರೂ ಬೇಕು‌. ನಾವೀಗ ಸ್ವತಂತ್ರವಾಗಿ ದೇಸಿ ಶೈಲಿಯ ಸಂಕ ನಿರ್ಮಾಣ ಮಾಡಿಕೊಂಡಿದ್ದೇವೆ, ಇನ್ನಾದರೂ ಸರ್ಕಾರ ಹೊಸದೊಂದು ಸೇತುವೆ ನಿರ್ಮಾಣ ಮಾಡುತ್ತಾ, ಈ ಭಾಗದ ಜನರಿಗೆ ಸ್ಪಂದಿಸುತ್ತಾರಾ ನೋಡುತ್ತೇನೆ ಎಂದು ಹೇಳುತ್ತಾರೆ.

Advertisement
ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ