ಬೆಂಗಳೂರು: ಮೈತ್ರಿ ವೈಫಲ್ಯ ಕುರಿತು ಸುದ್ದಿಗೋಷ್ಟಿಯಲ್ಲಿ ದೇವೇಗೌಡರ ಕುಟುಂಬವನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ನಿಮ್ಮ ಹಾಗೆ ಹಿಂದೆ ನಿಂತು ಆಟ ಆಡೋದಕ್ಕೆ ನನಗೆ ಬರೋದಿಲ್ಲ , ನನ್ನದೇನಿದ್ರೂ ನೇರ ರಾಜಕಾರಣ ಎಂದು ಹೇಳಿದ್ದಾರೆ.
ನಾನು ಸಿಎಂ ಆಗೋದನ್ನ ತಪ್ಪಿಸಿದ್ದು ನೀವೇ ಎಂಬುದು ಕುಮಾರಸ್ವಾಮಿ ಹೇಳಿಕೆಯಿಂದ ಸಾಬೀತಾಗಿತ್ತು, ನಾನು ಏನಿದ್ದರೂ ನೇರ ರಾಜಕಾರಣ ಮಾಡುವವನು, ನೇರವಾಗಿಯೇ ನಾನು ವಿರೋಧಿಸುತ್ತೇನೆ, ಹಿಂದೆ ಮುಂದೆ ನಿಂತು ಆಟವಾಡುವವನಲ್ಲ, ತಾತ,ಮಗ,ಮೊಮ್ಮಕ್ಕಳು ಎಲ್ಲರೂ ಎಲೆಕ್ಷನ್ ನಿಂತರು, ಅದಕ್ಕೆ ಜನ ಅವರನ್ನ ತಿರಸ್ಕರಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬೇಡ, ಫ್ರೆಂಡ್ಲಿ ಫೈಟ್ ಮಾಡೋಣ ಅಂತಾನೆ ಹೇಳಿದ್ದು , ಆದರೆ ಹೈಕಮಾಂಡ್ ನಿಂದಾಗಿ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡೆವು.
ಮಂಡ್ಯ,ಮೈಸೂರು,ತುಮಕೂರು,ಹಾಸನದಲ್ಲಿ ಜಂಟಿ ಪ್ರಚಾರಕ್ಕೂ ಹೋಗಿದ್ದೆ, ನಿಖಿಲ್ ಸೋಲಿಗೆ ಕಾರಣ ನಾನೇ ಅಂತ ಹೇಳಿದ್ದಾರೆ, ಹಾಗಾದ್ರೆ ಚಿಕ್ಕಬಳ್ಳಾಪುರ,ಮೈಸೂರು ಸೋಲಿಗೆ ಕಾರಣ ಯಾರು ಅಂತ ದೇವೇಗೌಡರನ್ನ ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದು ನಾವು ಕೆಲಸ ಮಾಡಿದ್ದರಿಂದಲೇ ಎಂದು ಸಿದ್ದು ಗುಟುರು ಹಾಕಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024
50 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್
ನಿರ್ಧರಿಸಿದೆ ದೊಡ್ಡಬಳ್ಳಾಪುರ ಮತ್ತೊಮ್ಮೆ ಮೋದಿ ಸರ್ಕಾರ
ಸಾಯಿಬಾಬಾನ ಕೃಪೆಯಿಂದ ಕುಮಾರಸ್ವಾಮಿ ಆಪರೇಷನ್ ಸಕ್ಸಸ್
ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿಯೇ ಅಭ್ಯರ್ಥಿ..! ಪುಟ್ಟರಾಜು ಘೋಷಣೆ..!
ರಾಜ್ಯದ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ದೇವೇಗೌಡರ ಪಾತ್ರ ದೊಡ್ಡದು: ಬಸವರಾಜ ಬೊಮ್ಮಾಯಿ