ಬೆಂಗಳೂರು:
ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ದೋಸ್ತಿ ಸರ್ಕಾರ ವೈಫಲ್ಯಕ್ಕೆ ದೇವೇಗೌಡ ಹಾಗೂ ಮಕ್ಕಳೇ ಕಾರಣ ಎಂದು ಹೇಳಿದ್ದಾರೆ.
ನನ್ನ ಮೇಲೆ ದೇವೇಗೌಡರು ಮಾತನಾಡಿದ್ದಾರೆ ಅದು ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಗ್ತಿದೆ, ನಾನು ಅದರ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ, ಆದರೆ ನಾನು ದೋಸ್ತಿಗೆ ಕಂಟಕವಾಗಿದ್ದೆ ಅಂತ ಗಂಭೀರ ಆರೋಪ ಮಾಡಿರೋದ್ರಿಂದ ಮೌನವಾಗಿದ್ದರೆ ಜನರಿಗೆ ಬೇರೆ ತರಹ ಸಂದೇಶ ಹೋಗುತ್ತೆ. ಹೀಗಾಗಿ ಇವತ್ತು ಮಾತನಾಡುತ್ತಿದ್ದೇನೆ ಎಂದರು.
ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ, ಕಳೆದ ಐದು ವರ್ಷಗಳಿಂದ ಪ್ರತಿಪಕ್ಷಗಳನ್ನ ಹತ್ತಿಕ್ಕುವ ಕೆಲಸ ನಡೆದಿದೆ, ಇಂದಿಗೂ ಈ ಧೋರಣೆ ಇದೆ,
ಸಂವಿಧಾನ ರಕ್ಷಿಸುವ ಕೆಲಸ ಪ್ರಜಾಸತ್ತಾತ್ಮಕ ಪಕ್ಷಗಳು ಮಾಡಬೇಕಿದೆ, ಜಾತ್ಯಾತೀತ ಶಕ್ತಿಗಳು ಒಂದಾಗಿ ಕೋಮುವಾದಿಯನ್ನ ಹತ್ತಿಕ್ಕಬೇಕಿರುವ ಅವಶ್ಯಕತೆ ಇದೆ, ಈ ಕಾರಣದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬುದಷ್ಟೇ ನನ್ನ ಕಳಕಳಿಯಾಗಿತ್ತು.
ನಾವು 80 ಶಾಸಕರಿದ್ದರೂ ಜೆಡಿಎಸ್ ಜೊತೆ ಮೈತ್ರಿಗೆ ಒಪ್ಪಿದ್ದೆ, ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಮರು ಮಾತನಾಡಿರಲಿಲ್ಲ, ನಾನೆಂದಿಗೂ ಕುಮಾರಸ್ವಾಮಿಗೆ ಹಸ್ತಕ್ಷೇಪ ಮಾಡಲಿಲ್ಲ, ಎಲ್ಲಾ ಶಾಸಕರು ಅವರ ಮೇಲೆ ಆರೋಪ ಮಾಡುತ್ತಿದ್ದರು, ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣನ ಮೇಲೆ ಆರೋಪ ಮಾಡುತಿದ್ದರು. ಇದನ್ನ ಶಾಸಕರು ನಮ್ಮ ಬಳಿಯೂ ಹೇಳಿದ್ದರು, ಆದರೂ ನಾನು ಸುಮ್ಮನಿದ್ದೆ, ಸರ್ಕಾರ ಬೀಳೋಕೆ ಅವರ ಸ್ವಯಂಕೃತ ಲೋಪಗಳೇ ಕಾರಣ, ಶಾಸಕರನ್ನ ಸಮಾಧಾನದಲ್ಲಿಟ್ಟುಕೊಳ್ಳೋಕೆ ಆಗಲಿಲ್ಲ, ಇವರ ತಪ್ಪು ಮುಚ್ಚಿಕೊಳ್ಳೋಕೆ ಬೇರೆಯವರ ಮೇಲೆ ಗೂಬೆ ಕೂರಿಸ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತ್ಯಾತೀತ ಪಕ್ಷಗಳ ಜವಾಬ್ದಾರಿ ಮರೆತ ದೇವೇಗೌಡರು
ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಮಾಡಿದ್ದಾರೆ,
ನನ್ನನ್ನ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು
ನಾವು ಐದಾರು ಸಭೆಗಳನ್ನ ಮಾಡಿರಬಹುದಷ್ಟೇ, ಆ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಜಾರಿಯಾಗಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಸಿದ್ದು ಗುಡುಗಿದ್ದಾರೆ.
ಕೇಂದ್ರ ಮಧ್ಯಂತರ ಬಜೆಟ್ ಸ್ವಾಗತಿಸಿದ ಹೆಚ್.ಡಿ.ಕುಮಾರಸ್ವಾಮಿ
5 ಗ್ಯಾರಂಟಿ ರದ್ದು; ಶಾಸಕರ ಮೂಲಕ ಕಾಂಗ್ರೆಸ್ ಪಕ್ಷವೇ ಹೇಳಿಸಿದೆ ಎಂದ ನಿಖಿಲ್
ಅಕ್ರಮ ಅದಿರಿ ಸಾಗಾಣೆ, ಹೆಚ್. ಕೆ. ಪಾಟೀಲ್ ವರದಿ ಏನಾಯ್ತು.? | ಹೆಚ್ ಡಿಕೆ ಪ್ರಶ್ನೆ
ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರಂಭ : ಕುಮಾರಸ್ವಾಮಿ ಆರೋಪ
ಇಂಧನ ಇಲಾಖೆ ಕರ್ಮಕಾಂಡ : ಕುಮಾರಸ್ವಾಮಿ ಕೆಂಡ
ಪಠ್ಯ ಗೊಂದಲ ಬೇಡ- ಮಾಜಿ ಸಿಎಂ ಕುಮಾರಸ್ವಾಮಿ