Featured
ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ನಲ್ಲಿ ರಕ್ಷಿತಾ ಟಾಪರ್

ರೈಸಿಂಗ್ ಕನ್ನಡ :
ಬೆಂಗಳೂರು:
ಕರ್ನಾಟಕ ಪರೀಕ್ಷಅ ಮಂಡಳಿ (ಕೆಸಿಇಟಿ) ಪ್ರಸಕ್ತ ವರ್ಷದ ಫಲಿತಾಂಶ ಪ್ರಕಟಿಸಿದೆ. ರಕ್ಷಿತಾ, ವರುಣ್ ಗೌಡ, ಸಾಯಿ ವಿವೇಕ್ ರಾಜ್ಯಕ್ಕೆ ಟಾಪರ್ಗಳಾಗಿ ಹೊರ ಹೊಮ್ಮಿದ್ದಾರೆ.
ಡಿಸಿಎಂ ಅಶ್ವತ್ಥನಾರಾಯಣ್ ಶುಕ್ರವಾರ ಮಲ್ಲೇಶ್ವರಂನ ಪರೀಕ್ಷಾ ಪ್ರಾಧಿಕಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.
ಈ ಬಾರಿಯ ಸಿಇಟಿ ಪರೀಕ್ಷೆ ಕೊರೊನಾದಿಂದಾಗಿ ವಿಳಂಬವಾಗಿತ್ತು. ಪರೀಕ್ಷೆ ನಡೆದ 20 ದಿನಗಳಲ್ಲೆ ಫಲಿತಾಂಶ ಹೊರ ಬಿದ್ದಿದೆ. 1,94,419 ವಿದ್ಯಾರ್ಥಿಗಳ ಪೈಕಿ 1,75,349 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 1,53,470 ಮಂದಿ ಱಂಕ್ ಪಡೆದಿದ್ದಾರೆ.
ಕೃಷಿ ಕೋರ್ಸ್ಗೆ 1,27,627 ವಿದ್ಯಾರ್ಥಿಗಳಿಗೆ, ವೆಟರ್ನರಿ ಕೋರ್ಸ್ಗೆ 1, 29,666, ಯೋಗ ಮತ್ತು ನ್ಯಾಚುರೋಪಥಿಗೆ 1,29,611 ಹಾಗೂ ಬಿ-ಫಾರ್ಮಾ- ಡಿ-ಫಾರ್ಮಾಕ್ಕೆ 1,55,552 ಮಂದಿಗೆ ರ್ಯಾಂಕ್ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದರು. ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಆರ್.ವಿ ಕಾಲೇಜಿನ ರಕ್ಷಿತಾ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಶ್ರೀ ಚೈತನ್ಯ ಇ ಟೆಕ್ನೋ ಶಾಲೆಯ ಶುಭನ್ ಎರಡನೇ ಸ್ಥಾನ, ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜಿನ ಶಶಾಂಕ್ ಬಾಲಾಜಿ ಮೂರನೇ ಸ್ಥಾನ ಗಳಿಸಿದ್ದಾರೆ.

ಅಕ್ಟೋಬರ್ ನಲ್ಲಿ ಕೌನ್ಸಲಿಂಗ್ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ನಡೆಸಿದೆ. ಆನ್ ಲೈನ್ ಮೂಲಕ ಎರಡು ಸುತ್ತಿನಲ್ಲಿ ಕೌನ್ಸಲಿಂಗ್ ಮಾಡುವುದಾಗಿ ಸರ್ಕಾರ ತಿಳಿಸಿದೆ. ಇನ್ನು ಕೃಷಿ ಕೋರ್ಸ್ನಲ್ಲಿ ವರುಣ್ ಗೌಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕೆ. ಸಂಜನ ಹಾಗೂ ಬಿ. ಜೋಗಿ ಕ್ರಮವಾಗಿ ಎರಡು, ಮೂರನೇ ಱಂಕ್ ಪಡೆದಿದ್ದಾರೆ. ಬಿ ಹಾಘೂ ಡಿ ಫಾರ್ಮದಲ್ಲಿ ವಿ.ಸಾಯಿವಿವೇಕ್ ಮೊದಲನೇ ರ್ಯಾಂಕ್, ಸಂದೀಪನ್ ನಸ್ಕರ್ ಎರಡನೇ ರ್ಯಾಂಕ್ , ಪವನ್ ಎಸ್. ಗೌಡ ಮೂರನೇ ರ್ಯಾಂಕ್ ಪಡೆದಿದ್ದಾರೆ. ಕೊರೊನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪರೀಕ್ಷೆ ನಡೆದ ದಿನ ವರಮಹಾಲಕ್ಷ್ಮಿ ಹಬ್ಬವಿತ್ತು. ಇಂದು ಗೌರಿ ಹಬ್ಬಕ್ಕೆ ಫಲಿತಾಂಶ ನೀಡುತ್ತಿದ್ದೇವೆ. 4.2 ರೇಟಿಂಗ್ ಆಗಿರುವುದು ನಮ್ಮ ಸರ್ಕಾರಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?