ರೈಸಿಂಗ್ ಕನ್ನಡ:
ನಾಗರಾಜ್.ವೈ. ಕೊಪ್ಪಳ:
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕೊಪ್ಪಳಕ್ಕೆ ಬರುತ್ತಾರೆ, ಮಿಟಿಂಗ್ ಮಾಡ್ತಾರೆ ಸಂಜೆ ಸೂಟ್ಕೇಸ್ ಹೆಗಲಿಗೆ ಹಾಕಿಕೊಂಡು ಮನೆಗೆ ಹೋಗ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪ ಮಾಡಿದರು. ಕಾಂಗ್ರೆಸ್ ನಿಂದ ಹಮ್ಮಿಕೊಳ್ಳಲಾಗಿದ್ದ ಜನಧ್ವನಿ ಕಾರ್ಯಕ್ರಮದ ನಂತರ ಮಾತನಾಡಿದ ಶಿವರಾಜ್ ತಂಗಡಗಿ, ಕೊರೊನಾವನ್ನು ನಿಭಾಯಿಸುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಮೀಟಿಂಗ್ ಮಾಡುತ್ತಿದ್ಧಾರೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮೀಟಿಂಗ್ ಮಾಡುವುದು ಏನಿತ್ತು ? ಇಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಜನ ಸಾಯುತ್ತಿದ್ದಾರೆ. ವೆಂಟಿಲೇಟರ್ ಇಲ್ಲದೇ ಜನ ಪರದಾಡುತ್ತಿದ್ಧಾರೆ. ಇಲ್ಲಿ ಕರೋನಾ ನಿಭಾಯಿಸುವುದನ್ನು ಬಿಟ್ಟು ಮೀಟಿಂಗ್ ಮಾಡುತ್ತಿದ್ಧಾರೆ.
ಯೂರಿಯಾದ ಕೃತಕ ಅಭಾವವನ್ನು ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಕೃಷಿ ಸಚಿವರು ಮತ್ತು ಸರಕಾರ ಭಾಗಿಯಾಗಿದೆ ಎಂದು ಆರೋಪ ಮಾಡಿದರು. ಕೇವಲ ಬಿಜೆಪಿ ಸರಕಾರ ಬಂದಾಗಷ್ಟೇ ಯಾಕೆ ಯೂರಿಯಾ ಅಭಾವ ಸೃಷ್ಟಿಯಾಗುತ್ತೆ ಎಂದು ಪ್ರಶ್ನೆ ಮಾಡಿದರು. ಇನ್ನೂ SDPI ಬ್ಯಾನ್ ಮಾಡುವ ಸರ್ಕಾರ RSS ಅನ್ನೂ ನಿಷೇಧಿಸಲಿ. RSS ಮತ್ತು SDPI ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಘಟನೆಯಲ್ಲಿ ತಪ್ಪು ಯಾರೇ ತಪ್ಪು ಮಾಡಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲಿ ಎಂದರು.
RSS ಮತ್ತು SDPI ಎರಡೂ ಒಂದೇ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹಿಂದೆ ಗಂಗಾವತಿಯಲ್ಲಿ ಮಚ್ಚನ್ನು ಹಿಡಿದುಕೊಂಡು ಓಡಾಡಿದ್ದಾರೆ .ಯಾರು ದೊಂಬಿ ಮಾಡ್ತಾರೋ ಅವರೆಲ್ಲರನ್ನೂ ಬ್ಯಾನ್ ಮಾಡಿ. RSS ಎಲ್ಲಿ ದಾಂಧಲೆ ಮಾಡಿದ್ದಾರೆ ಅಲ್ಲಿ ಶಿಕ್ಷೆಗೆ ಒಳಪಡಿಸುತ್ತೇವೆ ಅಂತಾ ತಾಕಥ್ ಇದ್ರೆ ಡಿಸಿಎಂ ಕಾರಜೋಳ ಅವರು ಹೇಳಲಿ. ಕಾರಜೋಳರ ಮಂತ್ರಿಗಿರಿ ಇರುತ್ತಾ ನೋಡೋಣ ಎಂದು ಸವಾಲು ಹಾಕಿದರು
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 21 ಕುರಿಗಳ ಬಲಿ
ಅಗ್ನಿಗೆ 5 ಬಣವಿಗಳು ಆಹುತಿ, ರೈತರಿಗೆ ಪರಿಹಾರ ನೀಡುವುದೇ ಸರಕಾರ
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಯಾಕಾಯ್ತು ಗೊತ್ತಾ?
ಕೊಪ್ಪಳದಲ್ಲಿ ನೀರಿನ ಬರ : ಶಾಲೆ ಬಿಟ್ಟರೂ ಕೊಡ ಹಿಡಿದು ನಿಂತರು
ಮಧ್ಯವರ್ತಿಗಳ ಹಾವಳಿ ತಡೆಗೆ ಸಚಿವ ಶಿವರಾಜ್ ತಂಗಡಗಿ ಸೂಚನೆ
RSS ಶಾಖೆಯಲ್ಲಿ ನೀಲಿಚಿತ್ರ ತೋರಿಸ್ತಾರೆ : ಮತ್ತೆ ವಿವಾದದ ಕಿಡಿ ಹೊತ್ತಿಸಿದ ಹೆಚ್.ಡಿ. ಕುಮಾರಸ್ವಾಮಿ