Featured
ಆಲಮಟ್ಟಿ ಡ್ಯಾಂನಿಂದ ನೀರು ಬಿಡುಗಡೆ: ಗ್ರಾಮಗಳ ಜಮೀನುಗಳಿಗೆ ನುಗ್ಗಿದ ನೀರು- ಬೆಳೆ ನಾಶ ಭೀತಿ

ರೈಸಿಂಗ್ ಕನ್ನಡ :
ವಿಜಯಪುರ:
ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಮಳೆಯಿಂದಾಗಿ ಆಲಮಟ್ಟಿ ಡ್ಯಾಂನಿಂದ 2.20 ಲಕ್ಷ ಕ್ಯುಸೆಕ್ಸ್ ನೀರು ಬಿಡುಗಡೆ ಪರಿಣಾಮ ಡ್ಯಾಂ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಜಿಲ್ಲೆಯ ಅರಳದಿನ್ನಿ, ಯಲಗೂರು, ಕಾಶಿನಕುಂಟೆ, ಬೂದಿಹಾಳ, ಮಸೂತಿ ಗ್ರಾಮಗಳ ಜಮೀನುಗಳಿಗೆ ಆಲಮಟ್ಟಿ ಡ್ಯಾಂ ನೀರು ನುಗ್ಗಿದೆ. ಅಂದಾಜು ನೂರು ಏಕರೆ ಜಮೀನಿಗೆ ನೀರು ನುಗ್ಗಿದೆ ಎಂದು ಹೇಳಲಾಗುತ್ತಿದೆ.
ಸೂರ್ಯಪಾನ, ಕಬ್ಬು, ಗೋವಿನ ಜೋಳ ಸೇರಿದಂತೆ ಹಲವು ಬೆಳೆ ಜಲಾವೃತ್ತವಾಗಿದೆ.
ಅರಳದಿನ್ನಿ ಗ್ರಾಮದಲ್ಲಿ 25 ಏಕರೆ ಕಬ್ಬಿನ ಗದ್ದೆ ಜಲಾವೃತವಾಗಿವೆ. 5 ಏಕರೆ ಸೂರ್ಯಕಾಂತಿ, ಗೋವಿನ ಜೋಳ ಬೆಳೆಗಳಿಗೆ ಜಲದಿಗ್ಬಂಧನವಾಗಿದೆ.
ಆಲಮಟ್ಟಿ ಡ್ಯಾಂನಿಂದ 2 ಲಕ್ಷ ಕ್ಕೂ ಅಧಿಕ ಕ್ಯುಸೆಕ್ ನೀರು ಹೊರ ಬಿಟ್ಟಾಗಲೆಲ್ಲ ಇಲ್ಲಿನ ಕೆಳ ಪ್ರದೇಶಗಳಿನ ಜಮೀನುಗಳು ಜಲಾವೃತ ಆಗುತ್ತವೆ. ಕೆಲದಿನಗಳ ಹಿಂದೆ ಜಮೀನುಗಳಿಗೆ ನೀರು ನುಗ್ಗಿದ್ದವು ಇದೀಗ ಮತ್ತೆ ಬೆಳೆಗಳು ಜಲಾವೃತ್ತವಾಗಿವೆ.ಪರಿಹಾರಕ್ಕಾಗಿ ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.
ಪ್ರತಿ ವರ್ಷ ಡ್ಯಾಂ ಗೆ ನೀರು ಹರಿದು ಬಂದಾಗಲು ಇದೆ ಸಮಸ್ಯೆ ಎದುರಿಸುತ್ತುರುವ ರೈತರು
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?