Featured
ಸಂತ್ರಸ್ಥರಿಗೆಲ್ಲರಿಗೂ ಪರಿಹಾರ, ಶೀಘ್ರವೇ ಕೇಂದ್ರದಿಂದ ಅನುದಾನ: ಶೆಟ್ಟರ್

ಉತ್ತರ ಕನ್ನಡ: ಮಳೆಯ ಆರ್ಭಟಕ್ಕೆ ತತ್ತರಿಸಿ ಹೋದ ಉತ್ತರಕನ್ನಡ ಜಿಲ್ಲೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಪ್ರವಾಸ ಮಾಡುತ್ತಿದ್ದು ಇಂದು ಕಾರವಾರದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ರಾಮನಗುಳಿ ಬಳಿ ಸಂತ್ರಸ್ಥರನ್ನ ಭೇಟಿ ಮಾಡಿ ಸ್ಥಿತಿಗತಿಗಳ ಅವಲೋಕನ ಮಾಡಿದರು. ಗಂಗಾವಳಿ ನದಿಪಾತ್ರದ ಜನರನ್ನೂ ಮಾತನಾಡಿಸಿದರು, ಈ ವೇಳೆ ರಾಮನಗುಳಿ-ಡೊಂಗ್ರಿ ಶಾಶ್ವತ ಸೇತುವೆಗಾಗಿ ಸ್ಥಳೀಯರು ಬೇಡಿಕೆ ಇಟ್ಟರು.
ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರ ಮನೆಕಳೆದುಕೊಂಡ ಸಂತ್ರಸ್ಥರಿಗೆ ಈಗಾಗಲೇ ಐದು ಲಕ್ಷ ರೂಪಾಯಿ ಪರಿಹಾರ ನೀಡುತ್ತಿದೆ, ಭಾಗಶಃ ಮನೆ ಹಾಳಾಗಿದ್ದವರೂ ಕೂಡ ೨೫ ಸಾವಿರ ರೂಪಾಯಿ ಪಡೆಯಲಿದ್ದಾರೆ, ವಿಶೇಷವಾಗಿ ಅರಣ್ಯ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರೂ ಕೂಡ ಪ್ರವಾಹದಿಂದ ಸೂರನ್ನ ಕಳೆದುಕೊಂಡಿದ್ದಾರೆ ಅಂತವರಿಗೂ ಕೂಡ ಸರ್ಕಾರ ಹೊಸ ನೀತಿ ರೂಪಿಸಿ ಪರಿಹಾರ ನೀಡಲಾಗುತ್ತೆ ಎಂದರು. ಪ್ರಕೃತಿ ವಿಕೋಪಕ್ಕೆ ನಲುಗಿದ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲು ಪ್ರಧಾನಿ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.